ಸುದ್ದಿ ಕಣಜ.ಕಾಂ
ಶಿಕಾರಿಪುರ: ಕರ್ತವ್ಯದ ವೇಳೆಯಲ್ಲಿ ಸಮವಸ್ತ್ರದಲ್ಲೇ ಮೋಜು, ಮಸ್ತಿ ಮಾಡಿ ವಿಡಿಯೋ ವೈರಲ್ ಆಗಿದ್ದೇ ನಾಲ್ಕು ಜನರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ನವೆಂಬರ್ 4ರಂದು ಶಿಕಾರಿಪುರದ ಅಂಜನಾಪುರ ಡ್ಯಾಂ ಬಳಿ ಅರೆ ಬೆತ್ತಲಾಗಿ ಕುಣಿದಿರುವ ವಿಡಿಯೋ ತುಣುಕು ವಾಟ್ಸ್ ಆ್ಯಪ್’ನಲ್ಲಿ ಹರಿದಾಡಿವೆ. ಇದರಿಂದ ಕಂಪೆನಿಯ ಘನತೆಗೆ ಧಕ್ಕೆಯಾಗಿದ್ದು ತಕ್ಷಣವೇ ಅವರನ್ನು ಅಮಾನತು ಮಾಡಲಾಗಿದೆ.
ಜೆ.ಇ. ಸೇರಿ ಆರು ಜನ ಸಸ್ಪೆಂಡ್:
ಕಿರಿಯ ಎಂಜಿನಿಯರ್ ಚಂದ್ರಶೇಖರ್ ರಾಠೋಡ್ ಮತ್ತು ಸಹಾಯಕ ಉಗ್ರಾಣ ಪಾಲಕ ಎಸ್.ಎ. ರವಿ ಅವರನ್ನು ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಅಮಾನತುಗೊಳಿಸಿದ್ದಾರೆ. ಅದೇ ಶಿಕಾರಿಪುರ ಪಟ್ಟಣ ಶಾಖೆಯ ಪವರ್ ಮ್ಯಾನ್ ಪಿ.ಎಲ್.ವಿನಯ್ ಕುಮಾರ್, ಹೊಸೂರು ಶಾಖೆಯ ಲೈನ್ ಮೆಕ್ಯಾನಿಕ್ ದರ್ಜೆ ಎರಡು ಕೆ.ಎಸ್. ಮಂಜುನಾಥ್, ಈಸೂರು ಶಾಖೆಯ ಮೆಕ್ಯಾನಿಕ್ ದರ್ಜೆ 2ರ ಎಲ್. ಸುರೇಶ್, ಶಿಕಾರಿಪುರ ಪಟ್ಟಣ ಶಾಖೆಯ ಮೆಕ್ಯಾನಿಕ್ ದರ್ಜೆ 2ರ ಟಿ. ಮಹೇಶ್ವರಪ್ಪ ಅವರನ್ನು ಶಿಕಾರಿಪುರ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅಮಾನತುಗೊಳಿಸಿ ಶನಿವಾರ
ಆದೇಶಿಸಿದ್ದಾರೆ.