ಶಿವಮೊಗ್ಗ: ಎಂಪಿಎo ಲೀಸ್ ಅವಧಿ 2020ರ ಆಗಸ್ಟ್ 12ರಂದು ಅಂತ್ಯಗೊoಡಿದೆ. ಸರ್ಕಾರ ಖಾಸಗಿಯವರಿಗೆ ನೀಡಲು ಮುಂದಾಗಿದ್ದು, ಇದರಿಂದ ಮಲೆನಾಡಿನ ಪರಿಸರಕ್ಕೆ ಇನ್ನಷ್ಟು ಹಾನಿಯಾಗುವ ಸಾಧ್ಯ ಇದೆ. ಹೀಗಾಗಿ, ಈ ಬಗ್ಗೆ ಸದನದ ಒಳಗೆ ಮತ್ತು ಹೊರಗೆ ದನಿ ಎತ್ತುವಂತೆ ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.
ಕಾರ್ಖಾನೆಯು 2015ರ ನವೆಂಬರ್ ತಿಂಗಳಿAದ ಕಾರ್ಯನಿರ್ವಹಣೆ ಬಂದ್ ಮಾಡಿದೆ. ಲೀಸ್ ಅವಧಿ ಮುಗಿದ ಬಳಿಕ ಭೂಮಿಯನ್ನು ಹಿಂದಿರುಗಿಸಬೇಕು. ಖಾಸಗಿಯವರಿಗೆ ಲೀಸ್ ನೀಡುವಂತಿಲ್ಲ ಎಂಬ ಷರತ್ತು ವಿಧಿಸಲಾಗಿತ್ತು. ಲೀಸ್ ಅನುಸಾರ 525 ಏಕ ಜಾತಿಯ ನೆಡುತೋಪುಗಳನ್ನು ಮಾಡಿದ್ದು ಅದರಲ್ಲಿ ಅಕೇಶೀಯಾ ಮತ್ತು ನೀಲಗಿರಿ ಗಿಡಗಳಿವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ತಾವು ಮುಖ್ಯಮಂತ್ರಿಯಾಗಿದ್ದಾಗ ಅಂತರ್ಜಲಕ್ಕೆ ಕುತ್ತು ತರುವ ನೀಲಗಿರಿಯನ್ನು ನಿಷೇಧಿಸಿದ್ದೀರಿ. ಆದರೆ, ಈಗಿನ ಸರ್ಕಾರ ಆ ನಿಷೇಧವನ್ನು ಹಿಂಪಡೆಯಲು ಮುಂದಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಎಂಪಿಎo ಲೀಸ್ಗೆ ನೀಡಿದ್ದ 20005.42 ಹೆಕ್ಟೆರ್ ಅರಣ್ಯ ಭೂಮಿಯನ್ನು ಸರ್ಕಾರ ತಕ್ಷಣ ಹಿಂಪಡೆದು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಬೇಕು. ಈ ನಿಟ್ಟಿನಲ್ಲಿ ವಿಪಕ್ಷ ನಾಯಕರಾಗಿ ನೀವು ಹೋರಾಟಕ್ಕೆ ಮುಂದಾಗಬೇಕು. ಪಶ್ಚಿಮಘಟ್ಟದ ಹಿತ ಕಾಪಾಡಬೇಕು ಎಂದು ಕೋರಲಾಗಿದೆ.
ಈ ವೇಳೆ, ಒಕ್ಕೂಟದ ಕೆ.ಪಿ. ಶ್ರೀಪಾಲ್, ಎಂ. ಗುರುಮೂರ್ತಿ, ಪ್ರೊ.ರಾಜೇಂದ್ರ ಚನ್ನಿ, ಶಶಿಸಂಪಳ್ಳಿ, ಶೇಖರ್ ಗೌಳೇರ್, ಜಿ.ಡಿ.ಮಂಜುನಾಥ್, ಸಿ.ಜು.ಪಾಶಾ, ಮಾಲತೇಶ್ ಬೊಮ್ಮನಕಟ್ಟೆ, ಮಂಜು ನವುಲೆ, ರವಿ ಹರಿಗೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.