ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಏಳು ತಿಂಗಳಿAದ ಮರಣ ಮೃದಂಗವನ್ನೇ ಬಾರಿಸಿದ್ದ ಕೊರೊನಾ ತಹಬದಿಗೆ ಬಂದಿದೆ. ಅದರಲ್ಲೂ ನವೆಂಬರ್ 4ರಿಂದ ಯಾವುದೇ ಸಾವುಗಳು ಸಂಭವಿಲ್ಲ ಎಂಬುವುದು ಜನರ ನೆಮ್ಮದಿಗೆ ಕಾರಣವಾಗಿದೆ.
ನವೆಂಬರ್ ತಿಂಗಳಲ್ಲಿ ಕೋವಿಡ್ ನಿಂದ ಇಬ್ಬರು ಮೃತಪಟಿದ್ದು, ನಾಲ್ಕರ ನಂತರವoತೂ ಸಾವಿನ ಸಂಖ್ಯೆ ಶೂನ್ಯವಾಗಿದೆ. ಜತೆಗೆ, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆಯಾಗಿದ್ದು, ಭಾನುವಾರದವರೆಗೆ 227 ಜನ ಮಾತ್ರ ಇಡೀ ಜಿಲ್ಲೆಯಲ್ಲಿ ಸೋಂಕಿತರಿರುವುದು ಮಿಡಿಯಾ ಬುಲೆಟಿನ್ ಹೇಳಿದೆ.
ಭಾನುವಾರದಂದು 35 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, 49 ಜನ ಗುಣಮುಖರಾಗಿದ್ದಾರೆ.
ಯಾವ ತಾಲೂಕಲ್ಲಿ ಎಷ್ಟು?: ಶಿವಮೊಗ್ಗ 13, ಭದ್ರಾವತಿ 5, ಶಿಕಾರಿಪುರ 9. ತೀರ್ಥಹಳ್ಳಿ 4, ಸೊರಬ 3 ಹಾಗೂ ಬೇರೆ ಜಿಲ್ಲೆಯ ಒಂದು ಪ್ರಕರಣ ದೃಢಪಟ್ಟಿದೆ.