ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಜರಂಗ ದಳದ ಸಹ ಸಂಚಾಲಕ ನಾಗೇಶ್ ಮೇಲಿನ ಹಲ್ಲೆ ಮತ್ತು ನಂತರದ ಬೆಳವಣಿಗೆಗಳ ಬಳಿಕ ಹೇರಲಾಗಿರುವ ನಿಷೇಧಾಜ್ಞೆ ಡಿಸೆಂಬರ್ 12ರವರೆಗೆ ಮುಂದುವರಿಯಲಿದೆ.
ನಿಷೇಧಾಜ್ಞೆ ವಿರೋಧದ ಬಗ್ಗೆ ಸಂಸದರು ಹೇಳಿದ್ದೇನು?
ಡಿಸೆಂಬರ್ 9ರ ಬೆಳಗ್ಗೆ 10ಕ್ಕೆ ಮುಗಿಯಬೇಕಿದ್ದ 144 ಅನ್ನು ಮತ್ತೆ ಮುಂದುವರಿಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಎಸ್.ಪಿ. ಕೆ.ಎಂ.ಶಾಂತರಾಜು ಅವರು, ಸುರಕ್ಷತೆ ದೃಷ್ಟಿಯಿಂದ 12ರವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ದೊಡ್ಡಪೇಟೆ, ತುಂಗಾನಗರ ಮತ್ತು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಡಿಸೆಂಬರ್ 9ರಂದು ಬೆಳಗ್ಗೆ 7ರಿಂದ 11 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಜನರು ಬಂದು ವಸ್ತುಗಳನ್ನು ಖರೀದಿಸಬಹುದು.