ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಾರಿಗೆ ಸಂಸ್ಥೆ ನೌಕರರ ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ಕರ್ತವ್ಯ ಗೈರಾದರೆ, ಇತ್ತ ಸಾರ್ವನಿಕರು ಪರದಾಡಿದರು. ಏತನ್ಮಧ್ಯೆ, ಮಾಚೇನಹಳ್ಳಿ ಸಮೀಪ ಸಿಟಿ ಬಸ್ ಮೇಲೆ ಕಲ್ಲು ತೂರಾಟ ಮಾಡಿದ್ದೇ ನೌಕರರು ಬಸ್ ಡಿಪೋದಿಂದ ಹೊರ ತೆಗೆಯುವುದಕ್ಕೂ ಹಿಂದೇಟು ಹಾಕಿದರು. ಆದರೆ, ಪ್ರಯಾಣಿಕರು ಮತ್ತು ನೌಕರರಿಗೆ ಧೈರ್ಯ ತುಂಬಿದ ಡಿಟಿಒ ಸತೀಶ್ ಅವರು ಲಭ್ಯ ಮಾನವ ಸಂಪನ್ಮೂಲದಲ್ಲೇ ಚಾಕಚಕ್ಯತೆಯಿಂದ ಎಲ್ಲವನ್ನೂ ನಿರ್ವಹಿಸಿದರು.
ಸಾರಿಗೆ ನೌಕರರ ಮುಷ್ಕರ, ನಾಳೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ
ಮುಷ್ಕರ ಹಿನ್ನೆಲೆ ಶೇ.50ರಷ್ಟು ಮಾತ್ರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇನ್ನುಳಿದವರಲ್ಲಿ ಕೆಲವರು ನೈಟ್ ಡ್ಯೂಟಿಯಲ್ಲಿದ್ದರೆ, ಹಲವರು ಮುಷ್ಕರಕ್ಕೆ ಬೆಂಬಲಿಸಿದ್ದರು. ಹೀಗಾಗಿ, 140ರಲ್ಲಿ ಕೇವಲ 55 ಬಸ್ ಮಾತ್ರ ರಸ್ತೆಗೊಳಿದ್ದಿದ್ದವು. ಶಿವಮೊಗ್ಗ ಜಿಲ್ಲೆಯ ಸಂಪರ್ಕಿಸುವ ಎಲ್ಲ ಬಸ್ ಸಂಚಾರವಿತ್ತು. ಆದರೆ, ದೂರದ ಮಾರ್ಗಕ್ಕೆ ಪ್ರಯಾಣಿಸುವ ಬಸ್ ಸೇವೆ ವ್ಯತ್ಯಯವಾಗಿತ್ತು.
ಇಲ್ಲಿದೆ ಕಂಪ್ಲೀಟ್ ವಿಡಿಯೋ ರಿಪೋರ್ಟ್ | watch and subscribe