ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗೋಂದಿಚಟ್ನಳ್ಳಿ ಗ್ರಾಮದಲ್ಲಿ ಲಾರಿಯೊಂದಕ್ಕೆ ಬೆಂಕಿ ತಗುಲಿದ ಘಟನೆ ಶುಕ್ರವಾರ ಸಂಭವಿಸಿದೆ. ಲಾರಿ ಚಾಲಕ ಚಹ ಸೇವನೆಗೆಂದು ಕೆಳಗಿಳಿದಾಗ ಲಾರಿಯ ಕ್ಯಾಬಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಷಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಕೆಲವೇ ಹೊತ್ತಲ್ಲಿ ಸುಟ್ಟು ಕರಕಲಾದ ಬಸ್
ಬಾಗಲಕೋಟೆ ಪಾಸಿಂಗ್ ವಾಹನ ಇದಾಗಿದ್ದು, ಕಾಬಿನ್ ಭಾಗಶಃ ಸುಟ್ಟು ಕರಕಲಾಗಿದೆ. ಡ್ರೈವರ್ ಸೀಟ್, ಕ್ಲೀನರ್ ಸೀಟ್, ಬ್ಯಾಕ್ ಸೀಟ್, ಟಾರ್ಪಲ್ ಹಗ್ಗಗಳು ಸುಟ್ಟಿವೆ.
ವಾಂಟೆಂಡ್ ಕಳ್ಳ ಅರೆಸ್ಟ್, ಕೆಜಿಗಟ್ಟಲೇ ಬೆಳ್ಳಿ ಜಪ್ತಿ
ಸಕಾಲಕ್ಕೆ ಬಂದ ಅಗ್ನಿಶಾಮಕ ವಾಹನ: ಲಾರಿಗೆ ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ವಾಹನ ಘಟನಾ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನೊಂದಿಸಿದೆ. ಹೀಗಾಗಿ, ವಾಹನದ ಭಾಗಶಃ ಮಾತ್ರ ಸುಟ್ಟಿದೆ.