ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜನವರಿ 1ರಿಂದ 700 ದಿನಗಳ ಕಾಲ ಭಗವದ್ಗೀತೆಯ 700 ಶ್ಲೋಕಗಳನ್ನು ಕಂಠಪಾಠ ಮತ್ತು ಪಾರಾಯಣ ಮಾಡುವ ಅವಕಾಶ ನೀಡಲಾಗಿದೆ. ಇದಕ್ಕೆ ಯಾರು ಬೇಕಾದರೂ ತಮ್ಮ ಹೆಸರನ್ನು ನೋಂದಾಯಿಸಿ ಉಚಿತವಾಗಿ ಮಹಾಯಜ್ಞ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು ಎಂದು ತರುಣೋದಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರರಾವ್ ಹೇಳಿದರು.
ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಸಂಸ್ಕøತ ಭಾರತಿ, ವಾಸವಿ ವಿದ್ಯಾಲಯ ಮತ್ತು ತರುಣೋದಯ ಸಂಸ್ಕøತ ಸೇವಾ ಸಂಸ್ಥೆ ಇವರ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪಯೋಗ ಪಡೆದುಕೊಳ್ಳುವಂತೆ ಕೋರಿದರು.
ದಿನಕ್ಕೆ ಕನಿಷ್ಠ 10 ನಿಮಿಷ: ಈ ಯೋಜನೆಯಲ್ಲಿ ನೋಂದಾಯಿಸಿದವರಿಗೆ ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕøತದಲ್ಲಿ ಕಲಿಸಿ ಕೊಡಲಾಗುತ್ತದೆ. ಕಂಠಪಾಠ ಮಾಡುವ ಕ್ರಮ ಕೂಡ ತಿಳಿಹೇಳಲಾಗುವುದು. ಆದರೆ, ಇದಕ್ಕಾಗಿ ದಿನಕ್ಕೆ ಕನಿಷ್ಠ 10 ನಿಮಿಷ ಕಲಿಯಲು ಆಸಕ್ತಿ ಹೊಂದಿರಬೇಕು ಎಂದು ತಿಳಿಸಿದರು.
ಭಗವದ್ಗೀತೆಯು ಮಾನವ ಸಮಾಜದ ಏಳಿಗೆಯನ್ನು ಬಯಸುತ್ತದೆ. ಜಾತಿ ಧರ್ಮಗಳ ನಡುವಿನ ಮನಸ್ತಾಪ, ಸಂಘರ್ಷದಿಂದ ಮುಕ್ತವಾದ ದೇಶ ನಿರ್ಮಾಣದ ಅವಶ್ಯಕತೆ ಇದೆ. ಇದನ್ನು ಸಾಧಿಸಲು ಭಗವದ್ಗೀತೆಯ ಅಧ್ಯಯನ ಅನಿವಾರ್ಯ. ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಾಗಿರದೆ ಇದರಲ್ಲಿ ವಿಜ್ಞಾನ. ತತ್ವಜ್ಞಾನ, ಮನೋವಿಜ್ಞಾನ ಇದೆ.
– ಅ.ನಾ.ವಿಜಯೇಂದ್ರರಾವ್, ತರುಣೋದಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ
ಆಸಕ್ತರು ತಮ್ಮ ಹೆಸರನ್ನು ಡಿಸೆಂಬರ್ 31ರೊಳಗೆ ಟಿ.ವಿ. ನರಸಿಂಹಮೂರ್ತಿ ಮೊಬೈಲ್ ಸಂಖ್ಯೆ 9902942060 ಇಲ್ಲವೇ ಅ.ನಾ.ವಿಜಯೇಂದ್ರ ರಾವ್ ಮೊಬೈಲ್ ಸಂಖ್ಯೆ 9448790127 ಸಂಪರ್ಕಿಸಬಹುದು. ಮಾಧ್ಯಮಗೋಷ್ಠಿಯಲ್ಲಿ ಸಂಸ್ಕøತ ಭಾರತಿ ಶಿವಮೊಗ್ಗ ನಗರಾಧ್ಯಕ್ಷ ಎನ್.ವಿ. ಶಂಕರನಾರಾಯಣ್, ಜಿಲ್ಲಾ ಸಂಯೋಜಕ ಟಿ.ವಿ.ನರಸಿಂಹಮೂರ್ತಿ, ಕೋಶಾಧ್ಯಕ್ಷ ಎನ್.ಆರ್.ಪ್ರಕಾಶ್, ನಿರ್ದೇಶಕಿ ಮಾಲಾ ರಾಮಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.