ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಾಲೆಗಳಲ್ಲಿ ನೀರು ಹರಿಸುವುದನ್ನು ನಿಲ್ಲಿಸಿ 38 ದಿನಗಳಾಗಿದೆ. ಹೀಗಾಗಿ, ಭದ್ರಾ ಎಡನಾಲೆಗೆ ನೀರು ಹರಿಸುವಂತೆ ಎಡನಾಲಾ ಅಚ್ಚುಕಟ್ಟುದಾರರ ಹಿತರಕ್ಷಣಾ ವೇದಿಕೆ ಮನವಿ ಮಾಡಿದೆ.
ರೈತರು ಜಿಯೋದಿಂದ ಏರ್ಟೆಲ್ಗೆ ಪೋರ್ಟ್!
ಭದ್ರಾ ಕಾಡಾ ಅಧ್ಯಕ್ಷೆ ಕೆ. ಪವಿತ್ರ ರಾಮಯ್ಯ ಅವರಿಗೆ ಈ ಸಂಬಂಧ ಸೋಮವಾರ ಮನವಿ ಮಾಡಿರುವ ವೇದಿಕೆ ಪದಾಧಿಕಾರಿಗಳು ಡಿಸೆಂಬರ್ 28ರಿಂದ ನೀರು ಹರಿಸುವಂತೆ ಒತ್ತಾಯಿಸಿದ್ದಾರೆ. ಭದ್ರಾ ಜಲಾಶಯ ನೀರಿನ ಮಟ್ಟ 178.10 ಅಡಿ ಇದೆ. 63 ಟಿಎಂಸಿ ನೀರು ಲಭ್ಯವಿದೆ.
ಕಾರಣವೇನು?: ಅಚ್ಚುಕಟ್ಟು ಪ್ರದೇಶದಲ್ಲಿ ಅಡಿಕೆ, ಭತ್ತ ಸಸಿ ಮಾಡಲು ಸೂಕ್ತ ಕಾಲ ಇದಾಗಿದೆ. 20 ದಿನಗಳಿಗೆ ಒಂದು ಸಾರಿ ನೀರಿನ ಅಗತ್ಯತೆ ಇರಲಿದೆ. ಅಚ್ಚುಕಟ್ಟು ಪ್ರದೇಶದ ಬೆಳೆಗಳು ಒಣಗಲಾರಂಭಿಸಿವೆ. ನಾಲೆಗಳ ಆಧುನೀಕರಣ ಕಾಮಗಾರಿ ಕೂಡ ಪೂರ್ಣಗೊಂಡಿದೆ. ಹೀಗಾಗಿ, ನಾಲೆಗೆ ನೀರು ಹರಿಸುವಂತೆ ಮನವಿ ಮಾಡಿದ್ದಾರೆ.
ಭದ್ರಾ ಜಲಾಶಯದಲ್ಲಿ ಕುಡಿಯುವ ನೀರು ಸೇರಿದಂತೆ ಬೇಸಿಗೆ ಹಂಗಾಮಿಗೆ 130 ದಿನಗಳಿಗೆ ಸಾಕಾಗುವಷ್ಟು ನೀರಿದೆ ಎಂದು ವೇದಿಕೆ ತಿಳಿಸಿದೆ.