ಸುದ್ದಿ ಕಣಜ.ಕಾಂ
ಸಾಗರ: ಗಾಂಧಿ ನಗರದಲ್ಲಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಗೆ ಮಂಗಳವಾರ ಜೆಡಿಎಸ್ ವರಿಷ್ಠ ಎಚ್.ಡಿ.ರೇವಣ್ಣ ಭೇಟಿ ನೀಡಿ ಸುದೀರ್ಘ ಸಮಾಲೋಚನೆ ಮಾಡಿದರು.
ಭೇಟಿಯ ಹಿಂದೆ ಯಾವುದೇ ರಾಜಕೀಯ ಕಾರಣವಿಲ್ಲ. ಕಾಗೋಡು ತಮ್ಮಪ್ಪ ಅವರು ಹಿರಿಯರು ರಾಜಕೀಯವಾಗಿ ನನ್ನ ಗುರುವಿದ್ದಂತೆ. ಕುಶಲೋಪರಿ ವಿಚಾರಿಸುವುದಕ್ಕಾಗಿ ಬಂದಿದ್ದೇನೆ. ಹರಿಹರದಲ್ಲಿ ವಾಲ್ಮೀಕಿ ಸಮಾವೇಶ ಮುಗಿಸಿ, ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರು ನಿಧನರಾಗಿದ್ದರು. ಅವರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಲು ಬಂದಿದ್ದೇನೆ. ಭೇಟಿಗೆ ರಾಜಕೀಯ ಬಣ್ಣ ಬಳಿಯುವ ಅಗತ್ಯವಿಲ್ಲ.
– ಎಚ್.ಡಿ.ರೇವಣ್ಣ, ಜೆಡಿಎಸ್ ವರಿಷ್ಠ
ಇತ್ತೀಚಿನ ರಾಜಕೀಯ ಬೇಸರ ತಂದಿದೆ | ಇತ್ತೀಚಿನ ರಾಜಕೀಯದಲ್ಲಿ ಕೆಲಸಕ್ಕಿಂತ ಬಣ್ಣಕ್ಕೆ ಹೆಚ್ಚು ಬೆಲೆ ಇದೆ. ಇದು ಬೇಸರ ತಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಕನ್ನಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಶೋಕ ಬರದವಳ್ಳಿ, ನಗರಸಭೆ ಸದಸ್ಯ ಮಧುಮಾಲತಿ, ಝಾಕೀರ್, ಡಿ.ದಿನೇಶ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.