ಸುದ್ದಿ ಕಣಜ.ಕಾಂ
ಸೊರಬ: ಅಗ್ನಿಶಾಮಕ ದಳ ಸಕಾಲಕ್ಕೆ ಆಗಮಿಸಿ ಬೆಂಕಿ ನಂದಿಸಿದ ಪರಿಣಾಮ ಆಗಬಹುದಿದ್ದ ಭಾರಿ ಅನಾಹುತ ತಪ್ಪಿದೆ. ಆದರೂ ಅಗ್ನಿ ಅವಘಡಕ್ಕೆ ಅಪಾರ ಪ್ರಮಾಣ ಅಡಕೆ, ಬಾಳೆ ಗಿಡಗಳು ಸುಟ್ಟ ಭಸ್ಮವಾಗಿವೆ.
ತಾಲೂಕಿನ ಬಾಡದಬೈಲು, ಮಳಲಗದ್ದೆ ಗ್ರಾಮದಲ್ಲಿ ಗುರುವಾರ ಘಟನೆ ಸಂಭವಿಸಿದೆ.
ಘಟನೆ 1 | ಬಾಡದಬೈಲು ಗ್ರಾಮದ ಸರ್ವೆ ನಂಬರ್ 315/16 ರಲ್ಲಿ ಪ್ರಭು ಪುರವಂತರ್ ಎಂಬವವರ ಜಮೀನಿನಲ್ಲಿ ಬೆಂಕಿ ಅವಘಡ ನಡೆದಿದೆ.
18 ಎಕರೆ ಜಮೀನಿನಲ್ಲಿ ಅವರು ಅಡಕೆ, ಬಾಳೆ ಮತ್ತು ತೆಂಗು ಬೆಳೆಸಿದ್ದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ 10 ತೆಂಗಿನ ಗಿಡ, 100-150 ಅಡಕೆ ಗಿಡ, 200-300 ಬಾಳೆ ಗಿಡಗಳಿಗೆ ಹಾನಿಯಾಗಿದೆ.
ಘಟನೆ 2 | ಮಳಲಗದ್ದೆ ಗ್ರಾಮದ ಸರ್ವೆ ನಂಬರ್ 121/01ರಲ್ಲಿ ಗಂಗಾಧರ್ ಗೌಡ ಎಂಬುವವರಿಗೆ ಸೇರಿದ 1 ಎಕರೆ 10 ಗುಂಟೆಯಲ್ಲಿ ಅಡಕೆ, ಬಾಳೆ ಬೆದಿದ್ದರು. ಅವಘಡದಿಂದಾಗಿ 300 ಅಡಕೆ ಸಸಿಗಳಿಗೆ ಹಾನಿ ಉಂಟಾಗಿದೆ. ಜತೆಗೆ, ಹನಿ ನಿರಾವರಿಯ ಪೈಪ್ ಲೈನ್ ಕೂಡ ಹಾಳಾಗಿದೆ.