ಸುದ್ದಿ ಕಣಜ.ಕಾಂ
ಶಿವಮೊಗ್ಗ: ದರೋಡೆ, ಹಲ್ಲೆ, ಪೋಕ್ಸೋ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವ 15 ಜನರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
ಆರೋಪಿಗಳು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ಇವರ ವಿರುದ್ಧ ನ್ಯಾಯಾಲಯ ವಾರೆಂಟ್ ಹೊರಡಿಸಿದ್ದು, ತುಂಗಾನಗರ ಪೊಲೀಸರು ಮಾರ್ಚ್ 8, 9 ಮತ್ತು 15ರಂದು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಯಾರನ್ನು ಯಾವಾಗ ಬಂಧಿಸಲಾಗಿದೆ?
ಮಾರ್ಚ್ 8ರಂದು 2017ನೇ ಸಾಲಿನಲ್ಲಿ ದಾಖಲಾದ ಗಾಂಜಾ ಮಾರಾಟ ಪ್ರಕರಣದ ಆರೋಪಿ ಜೆಪಿ ನಗರ ನಿವಾಸಿ ನಸೀರ್(25), 2017ನೇ ಸಾಲಿನಲ್ಲಿ ದಾಖಲಾದ 354 ಐಪಿಸಿ ಪ್ರಕರಣದ ಆರೋಪಿ ತುಂಗಾನಗರ ನಿವಾಸಿ ಗಣೇಶ (23), 2013ನೇ ಸಾಲಿನಲ್ಲಿ ದಾಖಲಾದ ಮನೆಗಳ್ಳತನ ಪ್ರಕರಣದ ಆರೋಪಿ ಅಹಮದ್ ವಾಜೀದ್ (27).
ಮಾರ್ಚ್ 9ರಂದು ನಡೆದ ಕಾರ್ಯಾಚರಣೆಯಲ್ಲಿ 2014ನೇ ಸಾಲಿನಲ್ಲಿ ದಾಖಲಾದ 354 ಐಪಿಸಿ ಪ್ರಕರಣದ ಆರೋಪಿ ಮೋಹನ್ (37), 2018ನೇ ಸಾಲಿನಲ್ಲಿ ದಾಖಲಾದ 354(ಬಿ) ಐಪಿಸಿ ಆರೋಪಿ ರಫೀಕ್ ಅಹಮದ್ (40), 2018ನೇ ಸಾಲಿನಲ್ಲಿ ದಾಖಲಾದ ಅಡ್ಡಗಟ್ಟಿ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ರಮೇಶ್(24), 2016 ನೇ ಸಾಲಿನಲ್ಲಿ ದಾಖಲಾದ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಅಂಜು ಅಲಿಯಾಸ್ ಮಹಮದ್ ಅಶ್ರಫ್(31), 2016ನೇ ಸಾಲಿನಲ್ಲಿ ದಾಖಲಾದ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಪ್ರಕರಣದ ಶಾಹೀದ್(30), 2017ನೇ ಸಾಲಿನಲ್ಲಿ ದಾಖಲಾದ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ, ಜೀವ ಬೆದರಿಕೆ ಪ್ರಕರಣದ ಆರೋಪಿ ಅಮ್ಜಾದ್ ಅಲಿಯಾಸ್ ಅಂಜು (30).
ಇದನ್ನೂ ಓದಿ | ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ಕು ಜನ ಅರೆಸ್ಟ್, ಅವರ ಬಳಿ ಸಿಕ್ಕಿದ ಮಾದಕ ವಸ್ತು ಎಷ್ಟು ಗೊತ್ತಾ?
ಮಾರ್ಚ್ 15ರಂದು 2017ನೇ ಸಾಲಿನಲ್ಲಿ ದಾಖಲಾದ ಎಸ್.ಸಿ, ಎಸ್.ಟಿ, ಪಿಎ ಕಾಯ್ದೆ ಪ್ರಕರಣದ ಆರೋಪಿ ಅಪ್ಸರ್ ಪಾಶಾ (35), 2018ನೇ ಸಾಲಿನಲ್ಲಿ ದಾಖಲಾದ ಪೋಕ್ಸೋ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ವೆಂಕಟೇಶ್(30), ತಿರುಮಲೇಶ್(26), 2017ನೇ ಸಾಲಿನಲ್ಲಿ ದಾಖಲಾದ ಗಾಂಜಾ ಮಾರಾಟ ಪ್ರಕರಣದ ಆರೋಪಿ ತಬ್ರೇಜ್(24), 2016ನೇ ಸಾಲಿನಲ್ಲಿ ದಾಖಲಾದ ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಅರುಣ್ (28), 2019ನೇ ಸಾಲಿನಲ್ಲಿ ದಾಖಲಾದ 354(ಬಿ) ಐಪಿಸಿ ಪ್ರಕರಣದ ಆರೋಪಿ ಚಂದ್ರಾ ನಾಯ್ಕ (57) ಎಂಬುವವರನ್ನು ಬಂಧಿಸಲಾಗಿದೆ.
ತುಂಗಾನಗರ ಪೆÇಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ದೀಪಕ್ ಹಾಗೂ ಪಿಎಸ್ಐ ತಿರುಮಲೇಶ್ ಮಾರ್ಗದರ್ಶನದಲ್ಲಿ ಠಾಣಾ ಸಿಬ್ಬಂದಿ ಸೋಮಾನಾಯ್ಕ್, ಪ್ರಶಾಂತ್, ಕೊಟ್ರೇಶ್, ಮಾಲತೇಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
https://www.suddikanaja.com/2021/03/12/internal-complaints-committee-is-mandatory-even-in-private-institutions/