ಸುದ್ದಿ ಕಣಜ.ಕಾಂ
ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತದ ಆವರಣವೀಗ ನಾರುತ್ತಿದೆ. ಎಲ್ಲೆಂದರಲ್ಲಿ ಬಾಟಲ್, ಕಸ ಬಿಸಾಡಲಾಗಿದ್ದು, ತ್ಯಾಜ್ಯದ ರಾಶಿ ಶೇಖರಣೆಯಾಗಿದೆ.
READ | ಕೆ.ಎಸ್.ಆರ್.ಟಿ.ಸಿ. ಬಸ್ ಮುಷ್ಕರ ಹಿನ್ನೆಲೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮತ್ತೊಂದು ರೈಲು ಸಂಚಾರ
ಶಿವಮೊಗ್ಗೆಯ ಅಸ್ಮಿತೆ ಜೋಗ | ಜಿಲ್ಲೆಯಲ್ಲಿ ಅಸ್ಮಿತೆಯಂತಿರುವ ಹಾಗೂ ದೇಶ, ವಿದೇಶಗಳಿಂದ ಜೋಗದ ಸೊಬಗನ್ನು ಕಾಣಸಲು ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುವ ರಾಜಾ, ರೋರರ್, ರಾಕೆಟ್, ರಾಣಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ, ಬೇಸಿಗೆಯಲ್ಲಿ ಜೋಗದ ಪ್ರಾಪತದಲ್ಲಿ ನೀರು ಕಡಿಮೆಯಾಗುವುದರಿಂದ ಪ್ರವಾಸಿಗರು ಈ ಕಡೆಗೆ ಬರುವುದು ವಿರಳ. ಹೀಗಾಗಿ, ಈ ಅಧ್ವಾನ ಸೃಷ್ಟಿಯಾಗಿದೆ.
ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯ ತಂದುಕೊಡುವ ಜೋಗ ಪ್ರವಾಸಿ ತಾಣದ ಪೂರ್ಣ ಜವಾಬ್ದಾರಿ ಹೊತ್ತಿರುವ ಜೋಗ ನಿರ್ವಹಣಾ ಪ್ರಾಧಿಕಾರ ಕೂಡ ಇದರೆಡೆಗೆ ಗಮನ ಹರಿಸುತ್ತಿಲ್ಲ.
ಜೋಗ ಟೆಂಡರ್ ಅವಧಿ ಮುಗಿದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತುರ್ತಾಗಿ ಜೋಗದ ಸ್ವಚ್ಛತೆಯ ಅಗತ್ಯವಿದೆ.