ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾವರೆಚಟ್ನಹಳ್ಳಿ ವಿದ್ಯುತ್ ವಿತರಣ ಕೇಂದ್ರಿಂದ ಹೊಸ 11 ಕೆ.ವಿ. ಹೊಸ ಫೀಡರ್ ಚಾಲನೆ ಕಾಮಗಾರಿಯಿಂದಾಗಿ ಏಪ್ರಿಲ್ 16ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ನಗರ ಉಪ ವಿಭಾಗ 1ರ ಎಇಇ ಪ್ರಕಟಣೆಯಲ್ಲಿ ಕೋರಿದ್ದಾರೆ.
ಎಲ್ಲೆಲ್ಲಿ ಕರೆಂಟ್ ಕಟ್ | ಬೊಮ್ಮನಕಟ್ಟೆ ಎ-ಎಚ್ ಬ್ಲಾಕ್, ಶಿವಬಸವ ನಗರ, ಇಂದಿರಾಗಾಂಧಿ ಬಡಾವಣೆ, ಕುವೆಂಪುನಗರ, ಕುವೆಂಪು ನಗರ, ಸೂಡಾ ಲೇಔಟ್, ತ್ರಿಮೂರ್ತಿ ನಗರ ನವುಲೆ, ಮಾರುತಿ ಬಡಾವಣೆ, ಸವಳಂಗ ರಸ್ತೆ, ಸರ್ಜಿ ಕನ್ವೆಷನಲ್ ಹಾಲ್, ಎಲ್.ಬಿ.ಎಸ್.ನಗರ, ಅಶ್ವಥ್ ನಗರ, ಕೀರ್ತಿ ನಗರ, ದೇವಂಗಿ 1 ಮತ್ತು 2ನೇ ಹಂತ, ಬಸವೇಶ್ವರ ನಗರ, ಡಾಲರ್ಸ್ ಕಾಲೊನಿ, ಪವನ ಶ್ರೀ ಬಡಾವಣೆ, ಕೃಷಿ ನಗರ 1, 2ನೇ ಮುಖ್ಯ ರಸ್ತೆ, ರಾಯಲ್ ಬಡಾವಣೆ, ಅನೂಪ್ ಪಾಟೀಲ್ ಬಡಾವಣೆ, ಪೆಬಲ್ಸ್ ಅಪಾರ್ಟ್ಮೆಂಟ್ ಹಾಗೂ ಸುತ್ತಲಿನ ಪ್ರದೇಶ.