ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಸೋಂಕು ತಡೆಗಟ್ಟುವುದಕ್ಕಾಗಿ ರಾಜ್ಯ ಸರ್ಕಾರ ನೈರ್ಟ್ ಕರ್ಫ್ಯೂಗೆ ಮುಂದಾಗಿದೆ. ಹೊಸ ಮಾರ್ಗಸೂಚಿಯಂತೆ ಬುಧವಾರ ರಾತ್ರಿ 9 ಗಂಟೆಯಿಂದಲೇ ಕಫ್ರ್ಯೂ ಅನ್ವಯವಾಗಲಿದೆ. ಆದರೆ, ಮೊದಲ ದಿನ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನೆಹರೂ ರಸ್ತೆಯ ಬಹುತೇಕ ಅಂಗಡಿಗಳು ಬಂದ್ ಇವೆ. ರಾತ್ರಿ 8.30ರಿಂದಲೇ ಪೊಲೀಸರು ಧ್ವನಿ ವರ್ಧಕದ ಮೂಲಕ ಸೂಚನೆ ನೀಡಲಾರಂಭಿಸಿದ್ದಾರೆ. ಕಡ್ಡಾಯವಾಗಿ ಅಂಗಡಿಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದಾರೆ. ಅದರ ಮಧ್ಯೆಯೂ ದುರ್ಗಗುಡಿ ರಸ್ತೆಯಲ್ಲಿ ವಾಹನಗಳ ಸಂಚಾರ ನಿತ್ಯದಂತಿತ್ತು. ಫ್ಯಾನ್ಸಿ, ಬಟ್ಟೆ, ದಿನಸಿ ಅಂಗಡಿಗಳು ತೆರೆದಿದ್ದವು.