ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಹ್ಯಾದ್ರಿ ಕಾಲೇಜು ಆವರಣವನ್ನು ಯಾವುದೇ ಕಾರಣಕ್ಕೂ ಸಾಯ್, ಖೇಲೋ ಇಂಡಿಯಾಗೆ ನೀಡಬಾರದು ಎಂದು ಸಹ್ಯಾದ್ರಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಆಗ್ರಹಿಸಿದರು.
https://www.suddikanaja.com/2021/04/17/2500-year-old-stone-weapon-found-in-bhadravati/
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹಳೆಯ ವಿದ್ಯಾರ್ಥಿಗಳಾದ ರೈತ ಮುಖಂಡ ಕೆ.ಟಿ.ಗಂಗಾಧರ್, ಕಾಲೇಜು ಆವರಣವೆಂದರೆ ವಿಶಾಲವಾಗಿರಬೇಕು. ಅದನ್ನು ಬಿಟ್ಟು ಜಾಗ ಖಾಲಿ ಇದೆ ಎಂಬ ಕಾರಣಕ್ಕೆ ಸರ್ಕಾರ ವಿವಿಧ ಯೋಜನೆಗಳನ್ನು ತಂದು ಅಲ್ಲಿ ತೂರುವುದು ಸರಿಯಲ್ಲ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕೈಗೊಂಡಿರುವ ನಿರ್ಧಾರ ಸರಿಯಲ್ಲ ಎಂದು ಹೇಳಿದರು.
ಜಿಲ್ಲಾಡಳಿತ ಪೂರ್ವಾಪರ ಯೋಚಿಸದೇ ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್ ಜಾಗವನ್ನು ಸಾಯ್ ಮತ್ತು ಖೇಲೋ ಇಂಡಿಯಾಗೆ ನೀಡಲು ಹೊರಟಿದೆ. ಇದರ ಹಿಂದೆ ಕಾಣದ ಕೈವಾಡವಿದೆ.
– ಡಿ.ಎಸ್.ಗುರುಮೂರ್ತಿ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ
ಸರ್ಕಾರ ಮಲೆನಾಡು ಪ್ರದೇಶ ಕ್ರೀಡೆ ಅಭಿವೃದ್ಧಿ ಆಗಬೇಕು. ಕ್ರೀಡಾ ಪ್ರತಿಭೆಗಳಿಗೆ ಅನುಕೂಲ ಆಗಬೇಕು ಎಂಬ ಕಾರಣಕ್ಕೆ ಸಾಯ್ ಮತ್ತು ಖೇಲೋ ಇಂಡಿಯಾ ತರಲು ಮುಂದಾಗಿದೆ. ಕ್ರೀಡಾಪಟುಗಳ ಭವಿಷ್ಯದ ದೃಷ್ಟಿಕೋನದಿಂದ ಇದು ಉತ್ತಮ ನಿರ್ಧಾರ. ಹೀಗಾಗಿ, ಇದಕ್ಕೆ ನಮ್ಮಿಂದ ಯಾವುದೇ ವಿರೋಧ ಇಲ್ಲ. ಆದರೆ, ಶಿವಮೊಗ್ಗದ ಹೊರವಲಯದಲ್ಲಿ ಸಾಕಷ್ಟು ಜಾಗವಿದ್ದು ಅಲ್ಲಿ ಮಾಡಲಿ. ಅದನ್ನು ಬಿಟ್ಟು ಸಹ್ಯಾದ್ರಿ ಕಾಲೇಜಿನಲ್ಲಿ ಯೋಜನೆ ಅನುಷ್ಠಾನಕ್ಕೆ ನಮ್ಮ ಪೂರ್ಣ ವಿರೋಧವಿದೆ. ಯಾವುದೇ ಕಾರಣಕ್ಕೂ ಕಾಲೇಜಿನ ಒಂದಿಂಚು ಭೂಮಿಯನ್ನು ನೀಡುವುದಿಲ್ಲ ಎಂದು ಹೇಳಿದರು.
ಶೈಕ್ಷಣಿಕ ಪ್ರಗತಿಗೆ ಯೋಜನೆಗಳು ಮಾರಕ | ಮುಂಬರುವ ದಿನಗಳಲ್ಲಿ ಡೀಮ್ಡ್ ವಿಶ್ವವಿದ್ಯಾಲಯವಾಗುವ ಸಹ್ಯಾದ್ರಿ ಕಾಲೇಜು ಶೈಕ್ಷಣಿಕ ಪ್ರಗತಿಗೆ ಕಟ್ಟಡಗಳ ನಿರ್ಮಾಣ ಆಘುವ ಅಗತ್ಯವಿದೆ. ಕ್ಯಾಂಪಸ್ ನ ಸಾಕಷ್ಟು ಜಮೀನನ್ನು ಸರ್ಕಾರ ವಿವಿಧ ಯೋಜನೆಗಳಿಗೆ ಬಳಸಿಕೊಂಡಿದೆ. ಈಗ ಮತ್ತೆ 18.04 ಎಕರೆ ಜಾಗದ ಮೇಲೆ ಕಣ್ಣು ನೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲ ಕೆ.ಪಿ.ಶ್ರೀಪಾಲ್, ಸಣ್ಣರಾಮ,ವಿಶ್ವನಾಥ್ ಕಾಶಿ, ಕೆ.ರಂಗನಾಥ್, ವಿದ್ಯಾರ್ಥಿ ಪ್ರಶಾಂತ್ ಉಪಸ್ಥಿತರಿದ್ದರು.
https://www.suddikanaja.com/2021/03/22/trap-to-protect-mango-crops-from-fruit-flies/