ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆಕ್ಸಿಜನ್ ಸಿಲಿಂಡರ್ ಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಸಿಲಿಂಡರ್ ಡೀಲರ್ ಕಂಪೆನಿಗಳ ವಿರುದ್ಧ ಭಾನುವಾರ ಪ್ರಕರಣ ದಾಖಲಿಸಲಾಗಿದೆ.
READ | ದಾವಣಗೆರೆ, ಹಾವೇರಿ, ಶಿವಮೊಗ್ಗ ಮೂಲದ 12 ಮಂದಿ ಕೊರೊನಾಗೆ ಬಲಿ
ಕೃತಕ ಆಕ್ಸಿಜನ್ ಸಿಲಿಂಡರ್ ಗಳನ್ನು ಯಾವುದೇ ಖಾಸಗಿ ಕಂಪನಿ, ಗ್ಯಾರೇಜ್, ಕೈಗಾರಿಕೆಗಳಿಗೆ ಮಾರಾಟ ಮಾಡದೇ, ಕೇವಲ ಆಸ್ಪತ್ರೆಯ ಉಪಯೋಗಕ್ಕಾಗಿ ಹಾಗೂ ಅನುಮತಿ ನೀಡಿದ ಕೈಗಾರಿಕೆಗಳಿಗೆ ಮಾತ್ರ ಬಳಸಲು ರಾಜ್ಯ ಸರ್ಕಾರದ ಆದೇಶಿಸಿದೆ. ಆದರೆ, ಇದನ್ನು ಉಲ್ಲಂಘಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆಟೋ ಕಾಂಪ್ಲೆಕ್ಸ್ ನ ಎರಡು ಕಂಪೆನಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಭಾನುವಾರದಂದು ವಿನೋಬನಗರ ಪೊಲೀಸ್ ಠಾಣೆ ಪಿ.ಎಸ್.ಐ ಪರಿಶೀಲನೆ ಮಾಡಿದಾಗ ಅನುಮತಿ ಇಲ್ಲದೇ ಇರುವವರಿಗೆ ಕೃತಕ ಆಕ್ಸೀಜನ್ ಸಿಲಿಂಡರ್ ಗಳನ್ನು ಮಾರಾಟ ಮಾಡುತ್ತಿದ್ದರು. ಇವರ ವಿರುದ್ಧ ಕಲಂ 4, 5 ದಿ ಕರ್ನಾಟಕ ಎಪಿಡೆಮಿಕ್ ಕಾಯ್ದೆ 2020ರ ಅಡಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಆಕ್ಸಿಜನ್ ತುಂಬಿದ ಒಟ್ಟು 8 ಸಿಲಿಂಡರ್ ಗಳನ್ನು ವಶಕ್ಕೆ ಪಡೆಯಲಾಗಿದೆ.
https://www.suddikanaja.com/2021/04/26/oxygen-plants-in-bhadravathi-and-sagar/