ಸುದ್ದಿ ಕಣಜ.ಕಾಂ
ಸಾಗರ: ಕೊರೊನಾ ಸೋಂಕಿತನೊಬ್ಬ ಆಸ್ಪತ್ರೆಯಿಂದ ಹೊರಗಡೆ ಬಂದು ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
READ | ಶಿವಮೊಗ್ಗದಿಂದ ಒಂದೇ ರೈಲು ಸಂಚಾರ, ಎಲ್ಲ ರದ್ದು
65 ವರ್ಷದ ವ್ಯಕ್ತಿಯೊಬ್ಬ ಎಳನೀರು ಕುಡಿಯುವುದಕ್ಕಾಗಿ ಹೊರಗಡೆ ಬಂದಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಆತನನ್ನು ವಾರ್ಡ್ ಗೆ ಕರೆದೊಯ್ಯಲಾಗಿದೆ.
ಬುಧವಾರ ಬೆಳಗ್ಗೆ ಚಹ ಸೇವಿಸುವುದಕ್ಕಾಗಿ ಇಬ್ಬರು ಸೋಂಕಿತರ ಹೊರಗಡೆ ಬಂದ ಘಟನೆಯೂ ಇದೇ ಆಸ್ಪತ್ರೆಯಲ್ಲಿ ನಡೆದಿದೆ.