ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾದಿಂದ ಮೃತಪಟ್ಟಿದ್ದ ವ್ಯಕ್ತಿಯ ಮುಖವನ್ನು ಕೊನೆಯದಾಗಿ ನೋಡಲು ಮುಂದಾದ ಕುಟುಂಬಕ್ಕೆ ಶಾಕ್ ಕಾದಿತ್ತು!
https://www.suddikanaja.com/2021/04/11/man-dead-due-to-corona/
ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಶಿವಮೊಗ್ಗ ನಿವಾಸಿ ಷಡಾಕ್ಷರಪ್ಪ ಹಾಗೂ ನ್ಯಾಮತಿಯ ಮಲ್ಲಿಕಾರ್ಜನಪ್ಪ ಎಂಬುವವರು ಮೃತಪಟ್ಟಿದ್ದರು.
ಅಂದು ಆಗಿದ್ದೇನು | ಮೃತಪಟ್ಟ ಇಬ್ಬರ ಶವಗಳನ್ನು ಬುಧವಾರ ಬೆಳಗ್ಗೆ ಸಂಬಂಧಪಟ್ಟವರಿಗೆ ಒಪ್ಪಿಸಲಾಗಿದೆ. ಅಷ್ಟೊತ್ತಿಗಾಗಲೇ ಶಿವಮೊಗ್ಗ ಮತ್ತು ನ್ಯಾಮತಿ ತಾಲೂಕಿನ ತಮ್ಮ ತಮ್ಮ ಹಳ್ಳಿಗಳಲ್ಲಿ ಶವಸಂಸ್ಕಾರಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.
ಶಿವಮೊಗ್ಗದಲ್ಲಿ ಅಂತ್ಯಸಂಸ್ಕಾರ ನೆರವೇರಿಸುವುದಕ್ಕೂ ಮುನ್ನ ಷಡಾಕ್ಷರಪ್ಪ ಕುಟುಂಬದವರು ಕೊನೆಯದಾಗಿ ಒಮ್ಮೆ ಮುಖ ನೋಡುವುದಾಗಿ ಹೇಳಿದ್ದಾರೆ. ತೆರೆದು ನೋಡಿದಾಗ ಕುಟುಂಬದವರು ತಬ್ಬಿಬ್ಬು ಆಗಿದ್ದಾರೆ. ಅದು ಮತ್ತೊಬ್ಬರ ಶವವಾಗಿತ್ತು. ತಕ್ಷಣ ಶವಾಗಾರ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಬಳಿಕ ಸಿಬ್ಬಂದಿ ನ್ಯಾಮತಿಯ ಮಲ್ಲಿಕಾರ್ಜುನಪ್ಪ ಎಂಬುವವರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಷಡಾಕ್ಷರಪ್ಪ ಕುಟಂಬದವರು ಮಲ್ಲಿಕಾರ್ಜುನಪ್ಪ ಕುಟುಂಬದವರನ್ನು ಸಂಪರ್ಕಿಸಿ ಅಂತ್ಯಕ್ರಿಯೆ ಮಾಡದಂತೆ ಹಾಗೂ ಮಲ್ಲಿಕಾರ್ಜುನಪ್ಪ ಅವರ ಶವವನ್ನು ತೆಗೆದುಕೊಂಡು ಅಲ್ಲಿಗೆ ಬರುವುದಾಗಿ ಹೇಳಿದ್ದಾರೆ. ಅವರವರ ಕುಟುಂಬದವರು ಶವಗಳನ್ನು ಪಡೆದು ನಂತರ ಎರಡೂ ಕಡೆಯವರು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
https://www.suddikanaja.com/2021/05/18/ambulance-will-seize-if-they-charge-heavy-amount-to-transport-died-body/