ಸುದ್ದಿ ಕಣಜ.ಕಾಂ
ಭದ್ರಾವತಿ: ಜೈ ಭೀಮ್ ನಗರದಲ್ಲಿ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಕೊನೆಗೆ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
https://www.suddikanaja.com/2021/01/28/four-person-arrested-in-shivamogga/
ಜೈಭೀಮ್ ನಗರ ನಿವಾಸಿ ಸುನೀಲ್ ಎಂಬುವವರು ಕೊಲೆಯಾಗಿದ್ದು, ಶ್ರೀಕಂಠ ಎಂಬಾತನಿಗೆ ಗಾಯಗಳಾಗಿವೆ.
ಅನ್ವರ್ ಕಾಲೊನಿ ನಿವಾಸಿ ಸಾದಿತ್ ಎಂಬಾತ ಪಕ್ಕದ ಬಡಾವಣೆಯಾದ ಜೈಭೀಮ್ ನಗರಕ್ಕೆ ಸಿಗರೇಟ್ ಸೇದುವುದಕ್ಕಾಗಿ ಬಂದಿದ್ದಾನೆ. ಆಗ ಲಾಕ್ ಡೌನ್ ಇದ್ದು, ಈ ರೀತಿ ಓಡಾಡಬೇಡಿ. ಪೊಲೀಸರು ಹಿಡಿಯುತ್ತಾರೆ ಎಂದು ಸುನೀಲ್ ಸಾದಿತ್ಗೆ ತಿಳಿಸಿದ್ದಾನೆ.
ಚಾಕುವಿನಿಂದ ಇರಿದು ಕೊಲೆ | ಇದೇ ಕಾರಣಕ್ಕೆ ಫೋನ್ ಮಾಡಿ ಸಾದಿತ್ ಕೆಲವು ಹುಡುಗರನ್ನು ಕರೆಸಿದ್ದಾನೆ. ಬೈಕ್ನಲ್ಲಿ ಬಂದ ಮೂವರು ಅಲ್ಲಿಯೇ ನಿಂತುಕೊಂಡಿದ್ದ ಸುನೀಲ್, ಶ್ರೀಕಂಠ ಹಾಗೂ ರಹೀಮ್ ಎಂಬುವವರ ಮೇಲೆ ಬೈಕ್ ಹತ್ತಿಸಿದ್ದಾನೆ. ಮಾತಿಗೆ ಮಾತು ಬೆಳೆದು ಸುನೀಲ್ ಮತ್ತು ಶ್ರೀಕಂಠನಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ.
https://www.suddikanaja.com/2020/12/12/mother-killed-her-own-child-in-bengaluru/
ತೀವ್ರ ಗಾಯಗೊಂಡಿದ್ದ ಸುನೀಲ್ ಮತ್ತು ಶ್ರೀಕಂಠ ಎಂಬುವವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸುನೀಲ್ ಮೃತಪಟ್ಟಿದ್ದಾನೆ. ಶ್ರೀಕಂಠನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ನಾಲ್ವರು ಆರೋಪಿಗಳು | ಪ್ರಕರಣದಲ್ಲಿ ಹಿದಾಯತ್, ಸಾದಿಕ್, ಜುನೈದ್ ಮತ್ತು ನಿಶಾದ್ ಎಂಬುವವರು ಆರೋಪಿಗಳಾಗಿದ್ದು, ಪೊಲೀಸರು ಇವರು ಹುಡುಕಾಟ ನಡೆಸಿದ್ದಾರೆ. ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2021/01/28/four-person-arrested-in-shivamogga/