ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಮಾತನಾಡುತ್ತಿರುವ ಸಿ.ಪಿ. ಯೋಗೇಶ್ವರ್ ಅವರ ಮೇಲೆ ಎಂಎಲ್ಸಿ ಆಯನೂರು ಮಂಜುನಾಥ್ ಕಿಡಿ ಕಾರಿದ್ದಾರೆ.
ಬಿಜೆಪಿ ಪಕ್ಷಕ್ಕೆ ಯೋಗೇಶ್ವರ್ ವೊಬ್ಬ ಕೊರೊನಾ ವೈರಸ್ ಇದ್ದಂತೆ. ಒಂದನೆ, ಎರಡನೇ ಈಗ ಮೂರನೇ ಅಲೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.suddikanaja.com/2021/05/18/plan-to-make-rural-place-covid-free-bold-step-by-mla/
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಅವರು ಒಬ್ಬ ಅಲೆಮಾರಿ ತಾನು ಸ್ವತಃ ಗೆದ್ದು ಎಂಎಲ್ಸಿ ಆಗಲು ಸಾಧ್ಯವಾಗದವರು. ಅಂತಹವರು ಸಿಎಂ ಬದಲಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ. ಪದೇ ಪದೆ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಒಂದುವೇಳೆ, ಸಿಎಂ ಮೇಲೆ ವಿಶ್ವಾಸ ಇಲ್ಲ ಎನ್ನುವುದಾದರೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ಯೋಗೇಶ್ವರ್ ನೈತಿಕತ ನೆಲೆಗಟ್ಟಿ ಮೇಲೆ ರಾಜೀನಾಮೆ ನೀಡಬೇಕು. ಇಲ್ಲವಾದರೆ, ಸಿಎಂ ಅವರನ್ನು ಕಿತ್ತು ಹಾಕಬೇಕು ಎಂದು ತಿಳಿಸಿದ್ದಾರೆ.
ಯೋಗೇಶ್ವರ್ ಅತೃಪ್ತ ಆತ್ಮ, ಟ್ರೀಟ್ಮೆಂಟ್ ಅಗತ್ಯವಿದೆ | ಯೋಗೇಶ್ವರ್ವೊಬ್ಬ ಅತೃಪ್ತ ಆತ್ಮ, ಅವರಿಗೆ ಮಾನಸಿಕ ಸಮಸ್ಯೆ ಇದೆ ಎನಿಸುತ್ತದೆ. ಹೀಗಾಗಿ, ಬೆಂಗಳೂರಿನಲ್ಲಿರುವ ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಹೇಳಿದರು.
ಯಡಿಯೂರಪ್ಪ ಮಾಸ್ ಲೀಡರ್ ಅವರನ್ನು ಬದಲಿಸುವ ವಿಚಾರವೇ ಇಲ್ಲ. ಒಂದುವೇಳೆ, ಬದಲಿಸಿದರೆ, ಅದು ಜಿಪಂ, ತಾಪಂ ಚುನಾವಣೆಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಿಳಿಸಿದರು.
https://www.suddikanaja.com/2021/02/21/shivamogga-will-be-best-sports-center-in-india-said-kiren-rijiju/