ಸುದ್ದಿ ಕಣಜ.ಕಾಂ
ಶಿವಮೊಗ್ಗ: ಎರಡನೇ ಅಲೆ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳನ್ನು ಅತಿ ಹೆಚ್ಚು ಕಾಡಿದೆ. ಇದಕ್ಕೆ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯೇ ಸಾಕ್ಷಿಯಾಗಿದೆ.
https://www.suddikanaja.com/2020/11/22/demand-raise-for-historical-authority-in-shikaripura/
2021ರ ಮಾರ್ಚ್ ಅಂತ್ಯಕ್ಕೆ ಪ್ರಕರಣಗಳ ಏರುಗತಿ ಶುರುವಾಗಿದ್ದು, ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 52,026 ಪ್ರಕರಣಗಳು ಪತ್ತೆಯಾಗಿವೆ. ಆದರೆ, ಅದರಲ್ಲಿ 7,230 ಸಕ್ರಿಯ ಪ್ರಕರಣಗಳಿವೆ. ಇನ್ನುಳಿದವರು ಗುಣಮುಖರಾಗಿದ್ದಾರೆ.
ತಾಲೂಕು ವರದಿ | ಶಿವಮೊಗ್ಗದಲ್ಲಿ ಅತಿ ಹೆಚ್ಚು 19,797 ಮಂದಿಗೆ ಕೊರೊನಾ ಕಾಡಿದೆ. ಎರಡನೇ ಸ್ಥಾನದಲ್ಲಿ ಭದ್ರಾವತಿ ಇದ್ದು 8,781 ಜನರಿಗೆ ಸೋಂಕು ತಗುಲಿತ್ತು. ಅದೇ ರೀತಿ, ಶಿಕಾರಿಪುರದಲ್ಲಿ 5,988, ತೀರ್ಥಹಳ್ಳಿ 3,688, ಸೊರಬ 3,797, ಸಾಗರ 5,495 ಹಾಗೂ ಕೊರೊನಾ ಅತಿ ಕಡಿಮೆ ಬಾಧಿತ ತಾಲೂಕು ಹೊಸನಗರವಾಗಿದ್ದು ಇದುವರೆಗೆ 2,639 ಪ್ರಕರಣಗಳು ಪತ್ತೆಯಾಗಿವೆ. ಬಾಹ್ಯ ಜಿಲ್ಲೆಯ 1,841 ಪಾಸಿಟಿವ್ ಪ್ರಕರನಗಳು ಪತ್ತೆಯಾಗಿವೆ.
ವಿದ್ಯಾರ್ಥಿಗಳಿಗೆ ಕಾಡುತ್ತಿದೆ ಕೊರೊನಾ | ಮೊದಲನೇ ಅಲೆಯಲ್ಲಿ ಶಾಲಾ, ಕಾಲೇಜುಗಳು ರಜೆ ಇದ್ದವು. ಆದರೆ, ಈ ಸಲ ಎಸ್.ಎಸ್.ಎಲ್.ಸಿಗೆ ಆರಂಭದಲ್ಲಿ ತರಗತಿ ನಡೆಯಲು ಅವಕಾಶ ನೀಡಲಾಯಿತು. ನಂತರ ಅದನ್ನು ಸ್ಥಗಿತಗೊಳಿಸಲಾಯಿತು. ಆದರೆ, ಪಿಯುಸಿಯನ್ನು ಹಾಗೆಯೇ ಮುಂದುವರಿಸಲಾಯಿತು. ಇದರ ಫಲವಾಗಿ ಇದುವರೆಗೆ 1,510 ವಿದ್ಯಾರ್ಥಿಗಳಿಗೆ ಕೊರೊನಾ ಬಾಧಿಸಿದೆ. ಕಾಲೇಜು ಸಿಬ್ಬಂದಿಗೂ ಸೋಮಕು ಬಿಟ್ಟಿಲ್ಲ. 344 ಸಿಬ್ಬಂದಿಗೆ ಪಾಸಿಟಿವ್ ಬಂದಿದೆ.
ಭೀತಿ ಹುಟ್ಟಿಸುತ್ತಿದೆ ಸಾವು | ಸಾವಿನ ಸಂಖ್ಯೆ ಕೂಡ ಏಪ್ರಿಲ್ ಮತ್ತು ಮೇ ನಲ್ಲಿ ಅಧಿಕವಿದೆ. ಇಲ್ಲಿಯವರೆಗೆ 794 ಜನ ಮೃತಪಟ್ಟಿದ್ದಾರೆ. ವಿಶೇಷವೆಂದರೆ, ಮೃತಪಟ್ಟವರಲ್ಲಿ ಎಲ್ಲ ವಯೋವರ್ಗದವರಿದ್ದಾರೆ.
https://www.suddikanaja.com/2021/05/17/covid-3rd-wave/