ಸುದ್ದಿ ಕಣಜ.ಕಾಂ
ಶಿವಮೊಗ್ಗ: ವಾಕಿಂಗ್ ಮಾಡಲು ಬಂದವರಿಗೆ ಪೊಲೀಸರು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ಜಯನಗರ, ಕೋಟೆ, ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಕಾರ್ಯಾಚರಣೆ ಮಾಡಲಾಗಿದೆ.
VIDEO REPORT
ವಾಕಿಂಗ್ ಗೆ ಬಂದು ರಸ್ತೆ ಬದಿ ನಿಂತಿದ್ದ, ಅಲ್ಲಲ್ಲಿ ಹರಟುತಿದ್ದವರಿಗೆ ಹಿಡಿದು ಪೊಲೀಸ್ ಠಾಣೆಗೆ ಕರೆತಂದು ವರ್ಕೌಟ್ ಮಾಡಿಸಿದ್ದಾರೆ. ಡಿವೈಎಸ್ಪಿ ಪ್ರಶಾಂತ್ ಮುನ್ನೊಳಿ ಅವರು ಜಯನಗರ ಠಾಣೆ ಮುಂಭಾಗದಲ್ಲಿ ಜಾಗೃತಿ ಮೂಡಿಸಿದ್ದಾರೆ. ಕೊರೊನಾ ತಡೆಯುವುದಕ್ಕಾಗಿ ಪೊಲೀಸರು ಪಡುತ್ತಿರುವ ಕಷ್ಟಗಳ ಬಗ್ಗೆ ತಿಳಿ ಹೇಳಿದ್ದಾರೆ. ಹೀಗಾಗಿ, ಎಲ್ಲರೂ ಸಹಕಾರ ನೀಡಬೇಕು. ವಾಕಿಂಗ್ ಗೋಸ್ಕರ ಬೇರೆಡೆ ಬರದೇ ಮನೆಯ ಆವರಣದಲ್ಲೇ ವಾಕಿಂಗ್ ಮಾಡುವಂತೆ ತಿಳಿಸಿದರು.
https://www.suddikanaja.com/2021/04/20/police-department-distributed-mask-in-publick-place/
ಯಾವ ಠಾಣೆಯಲ್ಲಿ ಎಷ್ಟು ಜನರಿಗೆ ಕ್ಲಾಸ್ | ಜಯನಗರ ಠಾಣೆ ವ್ಯಾಪ್ತಿಯಲ್ಲಿ ವಾಕಿಂಗ್ ಗೆ ಬಂದಿದ್ದ 29 ಜನರನ್ನು ಹಿಡಿಯಲಾಗಿದೆ. ಹಾಗೂ 47 ವಾಹನ ಸೀಜ್ ಮಾಡಲಾಗಿದೆ. ಕೋಟೆ ಠಾಣೆ ವ್ಯಾಪ್ತಿಯಲ್ಲಿ 30 ಜನ ಮತ್ತು ತುಂಗಾ ನಗರ ವ್ಯಾಪ್ತಿಯಲ್ಲಿ ವಾಕಿಂಗ್ ಗೆ ಬಂದಿದ್ದ 12 ಮಂದಿಯನ್ನು ಹಿಡಿದು ಜಾಗೃತಿ ಮೂಡಿಸಲಾಗಿದೆ. ಯಾರಿಗೂ ದಂಡ ವಿಧಿಸಿಲ್ಲ. ಒಂದುವೇಳೆ, ಇದು ಮುಂದುವರಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಯಿತು.
https://www.suddikanaja.com/2021/06/01/police-securitybin-shivamogga-due-to-lock-down/