ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸೋಮಯ್ಯ ಲೇಔಟಿನ ಮನೆಯೊಂದರಲ್ಲಿ ನಗದು ಮತ್ತು ಚಿನ್ನಾಭರಣ ಕಳವು ಮಾಡಿರುವ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬೊಮ್ಮನಕಟ್ಟೆ ನಿವಾಸಿ ಮಹಮ್ಮದ್ ಶಾಬಾಜ್ ಅಲಿಯಾಸ್ ಶಾಬ(19), ಟಿಪ್ಪುನಗರ ನಿವಾಸಿ ಆದಿಲ್(20) ಬಂಧಿತ ಆರೋಪಿಗಳು. ಬಂಧಿತರಿಂದ 5,08,275 ರೂಪಾಯಿ ಮೌಲ್ಯದ 112 ಗ್ರಾಂ ಬಂಗಾರದ ಆಭರಣಗಳು, 24,000 ರೂಪಾಯಿ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ 1 ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಭಾಕರ್ ಅವರು ಮನೆಯಲ್ಲಿ ಇರದಿದ್ದಾಗ ಮನೆಯ ಬೀಗ ಮುರಿದು ಮೇ 25ರಂದು 196 ಗ್ರಾಂ ಬಂಗಾರದ ಆಭರಣ, 80,000 ರೂ. ನಗದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 454, 457, 380 ರಿತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.