ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲಾರಿ ಕೊಡಿಸುವುದಾಗಿ ನಂಬಿಸಿ 5 ಲಕ್ಷ ರೂಪಾಯಿ ಮೋಸ ಮಾಡಿರುವ ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಶುಕ್ರವಾರ ಬಂಧಿಸಲಾಗಿದೆ.
ಭದ್ರಾವತಿಯ ವೀರಾಪುರ ನಿವಾಸಿ ರಾಜೇಂದ್ರ(30) ಎಂಬುವವರನ್ನು ಬಂಧಿಸಲಾಗಿದೆ. ಈತನಿಂದ 5 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಜೂನ್ 12ರಂದು ಸೊರಬ ತಾಲೂಕಿನ ಕುಪ್ಪಗಡ್ಡೆ ನಿವಾಸಿ ಸುರೇಶ್ ಎಂಬುವವರನ್ನು ಲಾರಿ ಕೊಡಿಸುವುದಾಗಿ ನಂಬಿಸಿದ ರಾಜೇಂದ್ರ ಅವರು ಹೊಳೆಹೊನ್ನೂರಿನ ಎನ್.ಟಿ.ಸರ್ಕಲ್ ಗೆ ಕರೆಸಿಕೊಂಡು 5 ಲಕ್ಷ ರೂಪಾಯಿ ಪಡೆದಿದ್ದರು. ಆದರೆ, ಲಾರಿ ಮಾತ್ರ ಕೊಡಿಸಿರಲಿಲ್ಲ.
ಆರೋಪಿಯ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣೆಯ ಪಿಐ, ಪಿಎಸ್.ಐ, ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.