ಸುದ್ದಿ ಕಣಜ.ಕಾಂ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಶನಿವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಲಾಕ್ ಡೌನ್ ಸ್ವರೂಪ ಹಾಗೂ ಅದರ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರ ಪೂರ್ಣ ಮಾಹಿತಿ ಇಲ್ಲಿದೆ.
https://www.suddikanaja.com/2021/04/23/shivamogga-is-ready-for-weekend-curfew/
ರಾಜ್ಯದಲ್ಲಿ 5ಕ್ಕಿಂತ ಕಡಿಮೆ, 5-10ರ ನಡುವೆ ಹಾಗೂ 10ರ ಮೇಲ್ಪಟ್ಟು ಪಾಸಿಟಿವ್ ದರ ಹೊಂದಿರುವ ಜಿಲ್ಲೆಗಳನ್ನು ವಿಭಜಿಸಿ ಅದಕ್ಕೆ ಅನುಗುಣವಾಗಿ ಸಡಿಲೀಕರಣ ನೀಡಲಾಗಿದೆ. ತಾಂತ್ರಿಕ ಸಲಹಾ ಸಮಿತಿ ನೀಡಿರುವ ಸಲಹೆಗಳನ್ನು ಕಟ್ಟುನಿಟ್ಟಿನಿಂದ ರಾಜ್ಯದಲ್ಲಿ ಪಾಲಿಸಲಾಗುತ್ತಿದೆ.
ಮೈಸೂರಿನಲ್ಲಿ 10ಕ್ಕಿಂತ ಅಧಿಕ ಪಾಸಿಟಿವ್ ದರ ಇರುವುದರಿಂದ ಇಲ್ಲಿ ಲಾಕ್ ಡೌನ್ ನಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ನಿಬರ್ಂಧಗಳು ಮುಂದುವರಿಯಲಿವೆ.
5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಹೊಂದಿರುವ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಚಿಕ್ಕಬಳ್ಳಾಪುರ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ, ಬೀದರ್
ಹಲವು ಸಡಿಲೀಕರಣ | 5ಕ್ಕಿಂತ ಕಡಿಮೆ ಪಾಸಿಟಿವಿಟಿ ಹೊಂದಿರುವ ಜಿಲ್ಲೆಗಳಲ್ಲಿ ಎಲ್ಲ ಅಂಗಡಿಗಳನ್ನು ಬೆಳಗ್ಗೆಯಿಂದ ಸಂಜೆ 5 ಗಂಟೆಯವರೆಗೆ ತೆರೆಯಲು ಅನುವು ಮಾಡಿಕೊಡಲಾಗಿದೆ. ಏ.ಸಿ. ಚಾಲನೆಗೊಳಿಸಿದ ಹೋಟೆಲ್ ಕ್ಲಬ್ ರೆಸ್ಟೋರೆಂಟ್ ಗಳನ್ನು ಮದ್ಯ ಹೊರತು ಪಡಿಸಿ ಸೇವೆ ನೀಡಬಹುದು.
ಶೇ.50ರಷ್ಟು ಸಾಮಥ್ರ್ಯದೊಂದಿಗೆ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ವೀಕ್ಷಕರ ಹೊರತುಪಡಿಸಿ ಹೊರಾಂಗಣ ಕ್ರೀಡೆಗಳನ್ನು ಆಯೋಜಿಸಬಹುದು. ಲಾಡ್ಜ್, ರೆಸಾರ್ಟ್, ಜಿಮ್ (ಎಸಿ ಹೊರತಾಗಿ) ಶೇ.50ರಷ್ಟು ಜನರೊಂದಿಗೆ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿದೆ.
https://www.suddikanaja.com/2021/06/18/increase-in-sample-collection-decline-in-positivity-rate-in-shivamogga/
13 ಜಿಲ್ಲೆಗಳಿಗೆ ಇಲ್ಲ ಸಿಡಿಲಿಕೆ | ಶೇ.5ಕ್ಕಿಂತ ಅಧಿಕ ಪಾಸಿಟಿವ್ ದರದ ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳುರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ, ವಿಜಯಪುರದಲ್ಲಿ ಈ ಮುಂಚೆಯ ನಿಯಮಗಳೇ ಅನ್ವಯವಾಗಲಿವೆ. ಯಾವುದೇ ರೀತಿಯ ಸಡಿಲಿಕೆ ಇಲ್ಲ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ಇವುಗಳಿಗೆ ಪೂರ್ಣ ನಿರ್ಬಂಧ | ಈಜು ಕೊಳ, ಸಭೆ ಸಮಾರಂಭ, ರಾಜಕೀಯ ಕಾರ್ಯಕ್ರಮ, ಪೂಜಾ ಸ್ಥಳ ಶಿಕ್ಷಣ ಸಂಸ್ಥೆ, ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಹವಾ ನಿಯಂತ್ರಿತ ಶಾಪಿಂಗ್ ಕಾಂಪ್ಲೆಕ್ಸ್, ಪಬ್ಸ್ಗಳ ಮೇಲೆ ಪೂರ್ಣ ನಿರ್ಬಂಧವಿದೆ.
ನೈಟ್, ವೀಕೆಂಟ್ ಕರ್ಫ್ಯೂ ಟೈಟ್ | ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದೆ. ಆದರೂ ನಿತ್ಯ ನೈಟ್ ಕರ್ಫ್ಯೂ ಹೇರಲಾಗಿದೆ. ಇದು ಸಂಜೆ 7ರಿಂದ ಬೆಳಗ್ಗೆ 5ರ ವರೆಗೆ ಇರಲಿದೆ. ವಾರಾಂತ್ಯ ಕರ್ಫ್ಯೂ ಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಇರಲಿದೆ.
ಜತೆಗೆ, ಬಸ್ ಸಂಚಾರ ಆರಂಭಗೊಳ್ಳಲಿದ್ದು, ಶೇ.50ರಷ್ಟು ಮಿತಿಗೊಳಿಸಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
https://www.suddikanaja.com/2020/12/15/adding-name-into-voter-list-in-shivamogga/