ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗುತ್ಯಪ್ಪ ಕಾಲೋನಿಯ ಮೂರನೇ ಕ್ರಾಸ್ ನಲ್ಲಿ ಮನೆಯ ಬೀಗ ಮುರಿದು ಕಳ್ಳತನ ಮಾಡಿದ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಅವರಿಂದ ಕಳವು ಮಾಡಿದ ಬಂಗಾರ ವಶಕ್ಕೆ ಪಡೆಯಲಾಗಿದೆ.
https://www.suddikanaja.com/2021/05/13/police-arrested-thieves/
ನುಗ್ಗಿ ಮಲ್ಲಾಪುರ ನಿವಾಸಿ ಮೊಹ್ಮದ್ ಅಸ್ಲಂ(19), ಆಲ್ಕೊಳದ ಸಾದಿಕ್ (18), ಮಿಳ್ಳಘಟ್ಟದ ರೋಷನ್ ಕುಮಾರ್ (21) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಅಂದಾಜು 1 ಲಕ್ಷ ರೂಪಾಯಿ ಮೌಲ್ಯದ 27 ಗ್ರಾಂ ತೂಕದ ಬಂಗಾರದ ಸರ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ.
ವಿನಾಯಕ ಎಂಬುವವರ ಮನೆಯ ಬಾಗಿಲಿನ ಬೀಗವನ್ನು ಮುರಿದು 27 ಗ್ರಾಂ ಬಂಗಾರದ ಸರ ಕಳವು ಮಾಡಲಾಗಿದೆ. ಅವವರು ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕಲಂ 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ತುಂಗಾನಗರ ಠಾಣೆ ಪಿ.ಐ, ಪಿ.ಎಸ್.ಐ, ಸಿಬ್ಬಂದಿಯೊನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
https://www.suddikanaja.com/2020/11/11/bike-stealing-gang-arrested-in-tunga-nagar-ps/