ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಾದತ್ ಕಾಲೊನಿಯ ಜಾವೀದ್ ಎಂಬುವವರ ಗೋದಾಮಿನಿಂದ ಅಡಕೆ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
READ | ಊಟಕ್ಕೆ ಸಾಂಬಾರು ಮಾಡಿಲ್ಲವೆಂದು ತಾಯಿಯನ್ನೇ ಕೊಂದ ಭೂಪ
ಭದ್ರಾವತಿಯ ನೆಹರು ನಗರ ನಿವಾಸಿಗಳಾದ ದಾದಾಪೀರ್ (29), ಷಫೀವುಲ್ಲಾ (32) ಹಾಗೂ ಸಾದತ್ ಕಾಲೊನಿಯ ಸಲೀಮ್ (43) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 1,29,500 ರೂಪಾಯಿ ಮೌಲ್ಯದ ಒಟ್ಟು 700 ಕೆಜಿ ಅಡಕೆ, ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
READ | ಗಾಂಜಾ ಸಾಗಿಸುತ್ತಿದ್ದ 2 ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಅರೆಸ್ಟ್, ಜಪ್ತಿ ಮಾಡಿಕೊಂಡ ಗಾಂಜಾವೆಷ್ಟು?
ಜಾವೀದ್ ಅವರ ಅಡಕೆ ಗೋದಾಮಿನಲ್ಲಿ ಶೇಖರಿಸಿ ಇಟ್ಟಿದ್ದ ತಲಾ 35 ಕೆ.ಜಿಯ ಒಟ್ಟು 20 ಚೀಲ ಸಿಪ್ಪೆ ಗೋಟು ಅಡಕೆ ತುಂಬಿದ ಚೀಲಗಳನ್ನು ಇತ್ತೀಚೆಗೆ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 457, 380 ಅನ್ವಯ ಪ್ರಕರಣ ದಾಖಲಿಸಲಾಗುತ್ತು.
ತನಿಖೆ ನಡೆಸಿದ ಭದ್ರಾವತಿ ನಗರ ವೃತ್ತ ಪಿ.ಐ, ಪಿ.ಎಸ್.ಐ ಮತ್ತು ಸಿಬ್ಬಂದಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.
https://www.suddikanaja.com/2021/01/27/areca-nut-thieves-arrested-in-shivamogga/