ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಳಲಿಕೊಪ್ಪ ತಿರುವಿನ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿದ್ದಾರೆ.
READ| ಮೊದಲ ಸಲ ಈ ತಾಲೂಕಿನಲ್ಲಿ ಶೂನ್ಯ ಕೊರೊನಾ ಸೋಂಕು, ಉಳಿದ ತಾಲೂಕುಗಳ ಮಾಹಿತಿ ಇಲ್ಲಿದೆ
ವಾದಿ ಎ ಹುದಾ ನಿವಾಸಿ ಮೆಹತಾಬ್ ಅಹಮ್ಮದ್ (30) ಎಂಬುವವರನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ.
ಯಾವುದೇ ಪರವಾನಗಿ ಇಲ್ಲದೇ ಐದು ಗೋವುಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದಾಗ ತುಂಗಾನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಗೋವುಗಳನ್ನು ರಕ್ಷಿಸಿ, ಗೋಶಾಲೆಗೆ ಕಳುಹಿಸಲಾಗಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.