ಸುದ್ದಿ ಕಣಜ.ಕಾಂ
ಸಾಗರ: ದೇಶದಾದ್ಯಂತ ಲಸಿಕೆ ಕೋವಿಡ್ ಲಸಿಕೆ ಸಿಗದೇ ಜನ ಪರದಾಡುತ್ತಿರುವ ಬೆನ್ನಲ್ಲೇ ಮಾಜಿ ಸಚಿವರೊಬ್ಬರಿಗೂ ಇದರ ಬಿಸಿ ತಟ್ಟಿದೆ.
https://www.suddikanaja.com/2021/01/10/ediga-community-program-in-shivamogga/
ಮಾಜಿ ಸಚಿವ, ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರು ಮಂಗಳವಾರ ಸಾಗರದ ದೇವರಾಜ ಅರಸು ಸಭಾಭವನದಲ್ಲಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಆದರೆ, ಲಸಿಕೆ ಲಭ್ಯವಿಲ್ಲ ಎಂಬ ಬೋರ್ಡ್ ಅಳವಡಿಸಲಾಗಿದೆ. ಈ ಬಗ್ಗೆ ಅಧಿಕಾರಗಳಿಗೆ ಪ್ರಶ್ನಿಸಿದಾಗ ಬುಧವಾರ ಬರುವಂತೆ ತಿಳಿಸಿದ್ದಾರೆ. ಸಿಡಿಮಿಡಿಗೊಂಡ ಕಾಗೋಡು ಮನೆಗೆ ಮರಳಿದ್ದಾರೆ.
READ | ಜುಲೈ 15ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ಭೇಟಿ ನೀಡಲಿದ್ದಾರೆ?
ಮೆಸೇಜ್ ಬಂದ ಬಳಿಕವೇ ಹೋಗಿದ್ದರು | ಕಾಗೋಡು ತಿಮ್ಮಪ್ಪ ಅವರಿಗೆ ಎರಡನೇ ಡೋಸ್ ಪಡೆಯುವಂತೆ ಮೆಸೇಜ್ ಬಂದಿದ್ದು, ಅದಕ್ಕಾಗಿ ಕೇಂದ್ರಕ್ಕೆ ಹೋಗಿದ್ದಾರೆ. ಆದರೆ, ಹೋದ ಬಳಿಕ ಲಸಿಕೆ ಇಲ್ಲವೆನ್ನಲಾಗಿದೆ. ತಾವಾಗಿಯೇ ಮೆಸೇಜ್ ಕಳುಹಿಸಿ ಕೇಂದ್ರಕ್ಕೆ ಹೋದ ಬಳಿಕ ಲಸಿಕೆ ನೀಡದಿರುವುದು ಎಷ್ಟು ಸರಿ? ನನ್ನಂತಹವರ ಸ್ಥಿತಿಯೇ ಹೀಗಾಗಿರುವಾಗ ಜನಸಾಮಾನ್ಯರ ಕಥೆ ಏನು ಎಂದು ಪ್ರಶ್ನಿಸಿದ್ದಾರೆ.
ಬುಧವಾರವೂ ಕೊಡದಿದ್ದರೆ ಪ್ರತಿಭಟನೆ | ಅಧಿಕಾರಿಗಳು ಸೂಚನೆ ನೀಡಿರುವಂತೆ ಬುಧವಾರವೂ ಲಸಿಕೆ ನೀಡದಿದ್ದರೆ ಲಸಿಕೆ ಕೇಂದ್ರದ ಮುಂದೆಯೇ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹತ್ತು ಸಾವಿರ ಲಸಿಕೆಗಳನ್ನು ಕೂಡಲೇ ಕಳುಹಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗುವುದು. ಲಸಿಕೆ ನೀಡದಿದ್ದರೆ ಹೇಗೆ, ಸಾರ್ವಜನಿಕರ ಗೋಳು ಕೇಳಿವವರೇ ಇಲ್ಲವೇ ಎಂದು ಹೇಳಿದರು.
https://www.suddikanaja.com/2021/01/10/ediga-community-program-in-shivamogga/