ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭಾರಿ ಚರ್ಚೆ, ವಾದ, ವಿವಾದಗಳ ಬಳಿಕ ಬಸವೇಶ್ವರ ಪುತ್ಥಳಿ ಅನಾವರಣಕ್ಕೆ ರಾಜ್ಯ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಅದರ ಬೆನ್ನಲ್ಲೇ ಬಸವೇಶ್ವರ ಪುತ್ಥಳಿ ಅನಾವರಣಕ್ಕೆ ಭಾರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಲಂಡನ್ ನಿಂದ ಬಂದ ಬಸವಣ್ಣನ ಪುತ್ಥಳಿಗೆ ಶಿವಮೊಗ್ಗದೊಂದಿಗೆ ‘ಗುರುವಾರ’ದ ತಳಕು! ಏನಿದು ವಾರ ವೈಶಿಷ್ಟ್ಯ?
ನಗರದ ಗಾಂಧಿಪಾರ್ಕ್ ಮುಂಭಾಗದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ಗ್ರಿಲ್ಸ್ ಆದಿಯಾಗಿ ಎಲ್ಲ ತಯಾರಿಕೆಗಳನ್ನು ಮಾಡಲಾಗಿದೆ. ಪುತ್ಥಳಿ ಅಡಿ ವಿಶೇಷ ಕಲ್ಲು ಆಯ್ಕೆ ಮಾಡಲಾಗಿದ್ದು, ಇದಕ್ಕಾಗಿ ಮೇಯರ್ ಸುನೀತಾ ಅಣ್ಣಪ್ಪ ಅವರ ನೇತೃತ್ವದಲ್ಲಿ ಮಂಗಳವಾರ ಸೂತಕೋಟೆಗೆ ಭೇಟಿ ನೀಡಲಾಗಿದೆ.
ಯಾವ ಕಲ್ಲು, ಏನು ವಿಶೇಷ | ನೀರಜ್ ಪಾಟೀಲ್ ಅವರು 2018ರಲ್ಲಿ ಶಿವಮೊಗ್ಗಕ್ಕೆ ನೀಡಿದ ಬಸವೇಶ್ವರ ಪುತ್ಥಳಿಯನ್ನು ಶಿರಾ ಗ್ರ್ಯಾನೆಟ್ ಕಲ್ಲಿನ ಮೇಲೆ ಸ್ಥಾಪಿಸಲಾಗುತ್ತಿದೆ. ಸ್ಥಳೀಯವಾಗಿ ಲಭ್ಯವಿರುವ ಕಲ್ಲುಗಳಲ್ಲಿ ಗಟ್ಟಿಯಾಗಿರುವುದರಿಂದ ಅದನ್ನು ಆಯ್ಕೆ ಮಾಡಲಾಗಿದೆ.
ಸೂತಕೋಟೆ ಗ್ರಾಮಲ್ಲೆ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ಜ್ಞಾನೇಶ್ವರ್, ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಶಿವಕುಮಾರ್ ಇತರರು ಭೇಟಿ ನೀಡಿದರು. ಕೆಲಸವನ್ನು ಆದಷ್ಟು ಬೇಗ ಮುಗಿಸಿಕೊಡುವಂತೆ ಸೂಚಿಸಿದರು.
ಬಸವೇಶ್ವರ ಪುತ್ಥಳಿ ಅನಾವರಣ ವಿಳಂಬಕ್ಕೆ ಹಿಂದಿನ ಸರ್ಕಾರವೇ ಕಾರಣ: ಈಶ್ವರಪ್ಪ ಆರೋಪ