ತಾಲೂಕಿನ ಶಿರಾಳಕೊಪ್ಪ ಸಮೀಪದ ಮಾಯತ್ತಮ್ಮನ ಮುಚ್ಚಡಿ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ. ಸೋಮನಹಳ್ಳಿಯ ಬಸವರಾಜಪ್ಪ, ಮುತ್ತಳ್ಳಿಯ ಮಾತಲೇಶ್, ಸೋಮನಹಳ್ಳಿಯ ಪ್ರಶಾಂತ್, ಸಕ್ರಿಪೆಳ್ಳೆರದ ಸೋಮು, ತಿರುಕಗೌಡ, ವಿಶ್ವನಾಥ್, ಬಸವರಾಜ್ ಸೇರಿ 23 ಜನರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಪರಿಶಿಷ್ಟ ಜಾತಿಯ ಬಡಾವಣೆಯಲ್ಲಿ ಮಳೆಯ ನೀರು ತುಂಬಿದ ಪರಿಣಾಮ ಭಾರಿ ಸಮಸ್ಯೆಯಾಗುತಿತ್ತು. ಈ ಕುರಿತು ಪಿಡಿಒ ಹಾಗೂ ಸದಸ್ಯರ ಒಪ್ಪಿಗೆ ಪಡೆದೇ ಜೆಸಿಬಿ ಸಹಾಯದಿಂದ ನೀರನ್ನು ಹೊರಗೆ ಹಾಕಲಾಗಿದೆ. ಈ ವಿಚಾರಕ್ಕಾಗಿ ಜಗಳವಾಡಿ ಜಾತಿ ನಿಂದನೆ ಮಾಡಿರುವುದಾಗಿ ಗ್ರಾಮದ ನಿವಾಸಿ ಕೆ.ಪಿ.ವಿರೇಶ್ ಎಂಬುವವರು ಪೊಲೀಸ್ ಠಾಣೆಯ್ಲಿ ದೂರು ನೀಡಿದ್ದಾರೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.