ಸುದ್ದಿ ಕಣಜ.ಕಾಂ | SPECIAL STORY | POLITICS
ಶಿವಮೊಗ್ಗ: ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಅಚ್ಚರಿಯ ಪವರ್ ಫುಲ್ ಹುದ್ದೆ ನೀಡಲಾಗಿದೆ. ಸಿಎಂ ನಂತರದ ಸ್ಥಾನ ಎಂದೇ ಹೇಳಲಾಗುವ ಗೃಹ ಖಾತೆಯನ್ನು ನೀಡಿದ್ದು, ಅಂತೂ ಕಾಯ್ದಿದ್ದಕ್ಕೆ ಸಾರ್ಥಕವಾದ ಹುದ್ದೆಯನ್ನೇ ನೀಡಲಾಗಿದೆ.
ಕೃಷಿಯ ಬಗ್ಗೆ ಅತೀವ ಒಲವು ಹೊಂದಿರುವ ಆರಗ ಜ್ಞಾನೇಂದ್ರ ಅವರಿಗೆ ಕೃಷಿ ಇಲಾಖೆ ಸಿಗಬಹುದು ಎಂದುಕೊಳ್ಳಲಾಗಿತ್ತು. ಆದರೆ, ಪ್ರಮುಖ ಸ್ಥಾನವನ್ನೇ ನೀಡಲಾಗಿದೆ.
ಜೈಲು ವಾಸ ಅನುಭವಿಸಿದ ಆರಗ ಜ್ಞಾನೇಂದ್ರ
ಒಂದು ಕಾಲದಲ್ಲಿ ಆರಗ ಅವರು ಸೆರೆ ಮನೆ ವಾಸ ಅನುಭವಿಸಿದ್ದರು. ಈಗ ಅಚ್ಚರಿ ಎಂಬಂತೆ ಈಗ ಅದೇ ಖಾತೆಯ ಸಚಿವ ಸ್ಥಾನ ಲಭಿಸಿದೆ.
ಆರಗ ಅವರು ಕಾಲೇಜು ಓದುತಿದ್ದಾಗ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು 1975 ರಲ್ಲಿ ತುರ್ತು ಪರಿಸ್ಥಿತಿ ವಿಧಿಸಲಾಗಿತ್ತು. ಆ ವೇಳೆ ಆರಗ ಅವರು ಜೆಪಿ ಆಂದೋಲನಲ್ಲಿ ಭಾಗವಹಿಸಿದ್ದರು. ತುರ್ತು ಪರಿಸ್ಥಿತಿಉ ವಿರುದ್ಧ ದನಿ ಎತ್ತಿ ವಿದ್ಯಾರ್ಥಿಗಳನ್ನು ಸಂಘಡಿಸಿದ್ದರು. ಹೀಗಾಗಿ, ಅವರನ್ನು ಬಂಧಿಸಿ ಸರಕಾರ ಜೈಲಿಗೆ ಅಟ್ಟಲಾಗಿತ್ತು. ಆರು ತಿಂಗಳು ಜೈಲು ವಾಸ ಅನುಭವಿಸಿದ್ದರು.
ಸೋಲೇ ಗೆಲುವಿನ ಮೆಟ್ಟಿಲು ಆಗಿಸಿಕೊಂಡ ಆರಗ
ಆರಗ ಅವರ ತಾಳ್ಮೆಯ ಫಲವಾಗಿಯೇ ಪಕ್ಷದಲ್ಲಿ ಇಷ್ಟು ದೊಡ್ಡ ಸ್ಥಾನ ಲಭಿಸಿದೆ. ಪಕ್ಷಕ್ಕಾಗಿ ನಿರಂತರ ಶ್ರಮಿಸಿರುವ ಇವರು ಮೊದಲ ಚುಮಾವಣೆಯಲ್ಲಿ ಸೋತಿದ್ದರು ಎಂಬುವುದು ತಿಳಿದಿರಲೇಬೇಕು.
ವಿದ್ಯಾರ್ಥಿ ದೆಸೆಯಿಂದ ಆರ್.ಎಸ್.ಎಸ್. ಸಂಪರ್ಕಕ್ಕೆ ಬಂದಿದ್ದ ಅವರು ಹಲವು ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
1983ರಲ್ಲಿ ಮೊದಲ ಸಲ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡು ಸಾವಿರ ಮತಗಳ ಅಂತರದಲ್ಲಿ ಸೋಲುಂಡರು. 1985, 1989ರಲ್ಲೂ ಸೋಲಬೇಕಾಯಿತು. ಹೀಗೆ, ನಿರಂತರ ಸೋಲುಗಳನ್ನು ಅನುಭವಿಸಿದ ಅವರು ಹತಾಷರಾಗಲಿಲ್ಲ. ಪಕ್ಷ ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರು. ಬಿಜೆಪಿಯ ಜಿಲ್ಲಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು.
ತುರ್ತು ಪರಿಸ್ಥಿತಿ ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧಿಸಿದರು. ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಯಶಸ್ಸು ಕಂಡರು. ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದರು. ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು.
ಗೆಲ್ಲುವುದಿಲ್ಲ ಎಂಬ ನಂಬಿಕೆ ಹುಸಿಯಾಗಿಸಿದರು
ಸತತ ಸೋಲುಗಳ ಬಳಿಕ ಆರಗ ಅವರು 1994ರಲ್ಲಿ ಗೆದ್ದರು. ಒಮ್ಮೆ ಗೆದ್ದವರು ಮತ್ತೊಮ್ಮೆ ಗೆಲ್ಲುವುದಿಲ್ಲ ಎಂಬ ನಂಬಿಕೆಯನ್ನು ಆರಗ ಹುಸಿಯಾಗಿಸಿದರು. 1999 ಮತ್ತು 2004ರಲ್ಲಿ ಜಯಭೇರಿ ಸಾಧಿಸಿದರು. ಸಾಧಿಸಿದರು. 2008, 2013ರಲ್ಲಿ ಕಿಮ್ಮನೆ ವಿರುದ್ಧ ಸೋತರು.
2018ರ ವಿಧಾನ ಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಒಂದೆಡೆ ಕಾಂಗ್ರೆಸ್ಸಿನಿಂದ ಕಿಮ್ಮನೆ ರತ್ನಾಕರ್, ಜೆಡಿಎಸ್ ನಿಂದ ಆರ್.ಎಂ. ಮಂಜುನಾಥ್ ಗೌಡ ಅವರ ತೀವ್ರ ಪೈಪೋಟಿಯ ನಡುವೆಯೂ 22 ಸಾವಿರ ಮತಗಳ ಅಂತರದಲ್ಲಿ ಗೆದ್ದರು.
ಹೀಗೆ ಹಲವು ರಾಜಕೀಯ ಸವಾಲುಗಳ ನಡುವೆ ತೀರ್ಥಹಳ್ಳಿಯಲ್ಲಿ ಗೆಲುವು ಸಾಧಿಸಿದ ಆರಗ ಅವರಿಗೆ ಸಚಿವ ಸ್ಥಾನವೇ ಲಭಿಸಿರಲಿಲ್ಲ. ಆದರೆ, ಇದೇ ಮೊದಲು ಸಂಪುಟ ಪ್ರವೇಶಿಸಿದ್ದು ಪ್ರಭಾವಿ ಖಾತೆ ಮುಡಿಗೇರಿಸಿಕೊಂಡಿದ್ದಾರೆ.
ಒಂದೇ ಮಳೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಹಾನಿ, ಹಲವೆಡೆ ಗುಡ್ಡ ಕುಸಿತ, ಎಲ್ಲಿ ಎಷ್ಟು ಹಾನಿ?