ಸುದ್ದಿ ಕಣಜ.ಕಾಂ | KARNATAKA | POLITICS
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪ್ರವಾಸಕ್ಕಾಗಿ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ವಿಶೇಷವೆಂದರೆ, ಮಾಲ್ಡೀವ್ಸ್ ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಕಾವೇರಿ ನಿವಾಸಕ್ಕೆ ಇದೇ ವಾಹನದಲ್ಲಿ ಬಂದಿದ್ದಾರೆ.
https://www.suddikanaja.com/2020/11/29/robbery-in-sorab/
ಅಂದಾಜು 1 ಕೋಟಿ ರೂಪಾಯಿ ಮೌಲ್ಯದ ದುಬಾರಿ ಟೊಯಾಟೊ ವೆಲ್ ಫೈರ್ ಬಿಳಿ ಬಣ್ಣದ ಕಾರನ್ನು ಖರೀದಿಸಿದ್ದಾರೆ.
ಮಾಲ್ಡೀವ್ಸ್ ಟ್ರಿಪ್ ಮುಗಿಸಿ ಬಂದ ಯಡಿಯೂರಪ್ಪ
ರಾಜಕೀಯ ಜಂಜಾಟ ಎಲ್ಲದರಿಂದ ಐದು ದಿನಗಳ ಕಾಲ ಮಾಲ್ಡೀವ್ಸ್ ನಲ್ಲಿದ್ದ ಇದ್ದ ಅವರು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಅವರನ್ನು ಕರೆದುಕೊಂಡು ಹೋಗುವುದಕ್ಕೆ ಹೊಸ ಕಾರಿನಲ್ಲಿ ಸಿಬ್ಬಂದಿ ಬಂದಿದ್ದರು.
ಬಿ.ಎಸ್.ಯಡಿಯೂರಪ್ಪ ಅವರು 2023ರ ವಿಧಾನಸಭೆ ಚುನಾವಣೆಗಾಗಿ ಪಕ್ಷ ಸಂಘಟನೆ ಮಾಡಲಿದ್ದಾರೆ. ಅದಕ್ಕಾಗಿ, ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ತಮ್ಮ ವರ್ಚಸ್ಸು ಮತ್ತು ರಾಜಕೀಯ ಅನುಭವದ ಮೂಲಕ ಮುಂಬರುವ ಚುನಾವಣೆಗಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
https://www.suddikanaja.com/2020/12/31/car-fraud-by-a-person-in-shivamogga-do-you-know-where-it-found/