ಸುದ್ದಿ ಕಣಜ.ಕಾಂ | KARNATAKA | PROVIDENT FUND
ಶಿವಮೊಗ್ಗ: ಇಪಿಎಫ್ (ನೌಕರರ ಭವಿಷ್ಯ ನಿಧಿ) ಖಾತೆದಾರರು ಇ-ನಾಮಿನೇಶನ್ ಮೂಲಕ ತಮ್ಮ ಕುಟುಂಬದ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಮೂಲಕ ಸಂಸ್ಥೆಯು ನೀಡುವ ಸೌಲಭ್ಯಗಳನ್ನು ಯಾವುದೇ ಅಡಚಣೆಯಿಲ್ಲದೆ ಪಡೆಯುವಂತೆ ಭವಿಷ್ಯ ನಿಧಿ ಸಂಸ್ಥೆಯ ಪ್ರಾದೇಶಿಕ ಆಯುಕ್ತ ಎ.ಪಿ.ಉನ್ನಿಕೃಷ್ಣನ್ ಹೇಳಿದರು.
https://www.suddikanaja.com/2020/11/24/epf-pension-amount/
ಇಪಿಎಫ್ ಕಚೇರಿಯ ಸಭಾಂಗಣದಲ್ಲಿ ಭವಿಷ್ಯನಿಧಿ ಖಾತೆದಾರರು ಇ-ನಾಮನಿರ್ದೇಶನ ಮತ್ತು ಆಧಾರ್ ಜೋಡಣೆ ಮಾಡುವ ಕುರಿತು ಮಾಧ್ಯಮದ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡಿದರು.
ಇ-ನಾಮಿನೇಶನ್ ಪ್ರಯೋಜನಗಳೇನು?
ಇಪಿಎಫ್ ಖಾತೆದಾರರು ತಮ್ಮ ಖಾತೆಯಲ್ಲಿ ಇ-ನಾಮಿನೇಶನ್ ಮಾಡುವ ಮೂಲಕ ಆನ್ಲೈನ್ ಪಿಂಚಣಿ ಸೌಲಭ್ಯವನ್ನು ಪಡೆಯಬಹುದಾಗಿದೆ.
ಅಲ್ಲದೇ ಇ-ನಾಮಿನೇಶನ್ ಮಾಡಿಸಿದ ಖಾತೆದಾರ ಸಾವನ್ನಪ್ಪಿದ ಪಕ್ಷದಲ್ಲಿ ಆನ್ಲೈನ್ ಮೂಲಕವೇ ಕುಟುಂಬದ ನಾಮ ನಿರ್ದೇಶಿತ ಸದಸ್ಯರು ಭವಿಷ್ಯ ನಿಧಿ ಸಂಸ್ಥೆಯಿಂದ ದೊರೆಯಬಹುದಾದ ಸೌಲಭ್ಯಗಳ ಲಾಭ ಪಡೆಯಬಹುದಾಗಿದೆ. ಇದರಿಂದ ವಿನಾ ಕಾರಣ ಕಚೇರಿ ಅಲೆಯುವುದು ತಪ್ಪಲಿದೆ ಹಾಗೂ ಸಮಯದ ಉಳಿತಾಯವಾಗಲಿದೆ ಎಂದರು.
ಬರುವ ದಿನಗಳಲ್ಲಿ ತುರ್ತಾಗಿ ಇಪಿಎಫ್ ಹಿಂಪಡೆಯಬೇಕಾದರೂ ಇ-ನಾಮಿನೇಶನ್ ಅಗತ್ಯವಿದ್ದು, ನಾಮಿನೇಶನ್ ಇಲ್ಲದಿದ್ದರೆ ಹಣ ಹಿಂಪಡೆಯುವುದು ಕಷ್ಟವಾಗಲಿದೆ ಎಂದರು.
https://www.suddikanaja.com/2021/07/22/cashless-treatment-to-state-government-employees-said-cs-shadakshari/
ಚಾಲ್ತಿಯಲ್ಲಿದೆ ಇ-ನಾಮ ನಿರ್ದೇಶನ
ಇ-ನಾಮ ನಿರ್ದೇಶನ ಆಂದೋಲನ ಚಾಲ್ತಿಯಲ್ಲಿದ್ದು, ಖಾತೆದಾರರು ತಾವಿರುವ ಜಾಗದಿಂದಲೇ ಖಾತೆಗಳನ್ನು ನಿರ್ವಹಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಸಂಸ್ಥೆಯ ಜಾಲತಾಣದಲ್ಲಿ ವಿವರವಾಗಿ ನಮೂದಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶೇ.96ರಷ್ಟು ಖಾತೆದಾರರ ಆಧಾರ್ ಲಿಂಕ್
ಈಗಾಗಲೇ ಖಾತೆದಾರರು ತಮ್ಮ ಖಾತೆಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳುವಂತೆ ಕೋರಲಾಗಿದ್ದು, ಶೇ.96ರಷ್ಟು ಖಾತೆದಾರರು ಆಧಾರ್ ಜೋಡಣೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಖಾತೆದಾರರು ತಮ್ಮ ಪಾಸ್ ಬುಕ್ ವೀಕ್ಷಿಸಲು, ಖಾತೆಯಲ್ಲಿನ ಉಳಿತಾಯಗಳ ಬಗ್ಗೆ ಮಾಹಿತಿ ಪಡೆಯಲು, ಪರಿಷ್ಕರಿಸಿದ ಭವಿಷ್ಯನಿಧಿ ಖಾತೆಯನ್ನು ವೀಕ್ಷಿಸಲು ಮತ್ತಿತರ ಸೌಲಭ್ಯಗಳಿಗಾಗಿ ಇದು ಸಹಕಾರಯಾಗಲಿದೆ ಎಂದು ತಿಳಿಸಿದರು.
ನಿವೃತ್ತರಾದ ನಂತರ ಪಿಂಚಣಿ ವ್ಯವಸ್ಥೆ ಇಲ್ಲದ ಕಾರ್ಮಿಕ ವರ್ಗಕ್ಕೆ ನೆರವಾಗಲೆಂದು ರೂಪಿಸಲಾಗಿರುವ ನಿಧಿಯಿಂದಾಗಿ ಪ್ರಯಾಸ ಯೋಜನೆ ಅಡಿಯಲ್ಲಿ ಖಾತೆದಾರ ನೌಕರರು ತಮ್ಮ ನಿವೃತ್ತಿಯ ದಿನಾಂಕವನ್ನು 15 ದಿನಗಳ ಮುಂಚಿತವಾಗಿಯೇ ಸಂಸ್ಥೆಗೆ ತಿಳಿಸಿದಲ್ಲಿ ಪಿಂಚಣಿ ಪಾವತಿ ಆದೇಶವನ್ನು ನಿವೃತ್ತಿಯ ದಿನದಂದೇ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಈ ಎಲ್ಲ ಸೌಲಭ್ಯಗಳನ್ನು ಪಡೆಯಲಿಚ್ಚಿಸುವ ಭವಿಷ್ಯ ನಿಧಿ ಖಾತೆದಾರರು ತಮ್ಮ ಖಾತೆಗೆ ಆಧಾರ್ ಜೋಡಣೆ ಮಾಡಿಸುವಂತೆ ಹಾಗೂ ಇ-ನಾಮ ನಿರ್ದೇಶಕರ ಹೆಸರನ್ನು ಸೇರಿಸುವ ಮೂಲಕ ಯೋಜನೆಯ ಲಾಭ ಪಡೆದುಕೊಳ್ಳುವಂತೆ ತಿಳಿಸಿದರು.
ಸಹಾಯಕ ಆಯುಕ್ತ ಚಕ್ರಪಾಣಿ, ಇಒ ಅಸ್ಲಾಂ ಮೊಹಮ್ಮದ್ ಕಿತ್ತೂರು, ಎಒ ಮಹೇಶ್ ಉಪಸ್ಥಿತರಿದ್ದರು.
https://www.suddikanaja.com/2021/07/14/swamiji-prophesied-about-state-politics/