ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಅಡಿಕೆಗೆ ಮಾನ ಬಂದಿದ್ದೇ ಬೆಳೆಗಾರರ ಮೊಗದಲ್ಲಿ ನಗೆ ಬೀರುವಂತೆ ಮಾಡಿದೆ. ಇದರೊಂದಿಗೆ ಇನ್ನೊಂದು ಹೊಸ ತಲೆನೋವು ಆರಂಭವಾಗಿದೆ.
ಅಡಿಕೆಯ ಬೆಲೆ ಕ್ವಿಂಟಾಲ್ ಗೆ ₹50,000 ಅಧಿಕ ದಾಖಲಾಗಿದ್ದು, ಶಿವಮೊಗ್ಗದಲ್ಲಿ ಕಳ್ಳರ ಕಾಟ ಶುರುವಾಗಿದೆ.
READ | ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಯುವತಿಯ ಕೈಯಿಂದಲೇ ಮೊಬೈಲು ಕಿತ್ತು ಪರಾರಿಯಾದ ಖದೀಮ, ಒಂದೇ ದಿನ 3 ಮೂರು ಮೊಬೈಲ್ ಕಳವು
ಬೇಯಿಸಿ ಇಟ್ಟ ಅಡಿಕೆಯನ್ನೇ ರಾತ್ರೋರಾತ್ರಿ ಕಳವು ಮಾಡಲಾಗುತ್ತಿದೆ. ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ವ್ಯಾಪ್ತಿಯ ಮಲ್ಲಾಪುರದಲ್ಲಿ ಒಂದು ಕ್ವಿಂಟಲ್, ಕಲ್ಲಜ್ಜನಾಳ್ನಲ್ಲಿ ಎರಡು ಕ್ವಿಂಟಲ್, ಸೈದರಕಲ್ಲ ಹಳ್ಳಿಯಲ್ಲಿ ಎರಡು ಕ್ವಿಂಟಲ್ ಹಾಗೂ ಅರಬಿಳಚಿ ಗ್ರಾಮದಲ್ಲಿ ನಾಲ್ಕು ಕ್ವಿಂಟಲ್ ಬೇಯಿಸಿದ ಅಡಿಕೆ ಕಳವಾಗಿವೆ. ಜತೆಗೆ, ಇತ್ತೀಚೆಗೆ, ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲೂ ಹಸಿ ಅಡಿಕೆಯನ್ನೇ ಕಳ್ಳತನ ಮಾಡಲಾಗಿದೆ. ಹೊಸನಗರ, ಸಾಗರ ಹಾಗೂ ತೀರ್ಥಹಳ್ಳಿ ಭಾಗದಲ್ಲೂ ಇಂತಹ ಪ್ರಕರಣಗಳು ಕಂಡುಬಂದಿವೆ.
ಸಿಸಿ ಕ್ಯಾಮೆರಾ ಮೂಲಕ ಕಳ್ಳರ ಮೇಲೆ ನಿಗಾ
ಅಡಿಕೆಗೆ ಚಿನ್ನದ ಬೆಲೆ ಬಂದಿರುವುದರಿಂದ ಕಳ್ಳರು ಇವುಗಳ ಮೇಲೆ ಕಣ್ಣು ಹಾಕಿದ್ದಾರೆ. ಈ ಕಾರಣಕ್ಕಾಗಿಯೇ ಕಳ್ಳರ ಮೇಲೆ ನಿಗಾ ಇಡುವುದಕ್ಕಾಗಿ ತೋಟಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.
https://www.suddikanaja.com/2021/02/27/arecanut-thieves-arrested-in-bhadravati/