ಸುದ್ದಿ ಕಣಜ.ಕಾಂ | TALUK | CRIME NEWS
ಶಿರಾಳಕೊಪ್ಪ: ಶಿಕಾರಿಪುರ ರಸ್ತೆಯಲ್ಲಿ ಗುರುವಾರ ರಾತ್ರಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು, ಒಬ್ಬ ಸ್ಥಳದಲ್ಲೇ ಅಸುನೀಗಿದ್ದಾನೆ.
ಈಸೂರಿನ ಮಂಜಪ್ಪ (62) ಮೃತಪಟ್ಟಿದ್ದಾರೆ. ಚೌಕಿಸಾಲು ಮಠ ಬಳಿಯ ಶಿಕಾರಿಪುರ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ಬೈಕ್ ನಲ್ಲಿದ್ದ ಮಂಜಪ್ಪ ಅವರೊಂದಿಗೆ ಮಗ ಅಭಿಲಾಷ್ ಕೂಡ ಪ್ರಯಾಣಿಸುತ್ತಿದ್ದ. ಆತನಿಗೂ ಗಾಯಗಳಾಗಿವೆ.
READ | ಶಿವಮೊಗ್ಗ ದಸರಾ ರೂಪುರೇಷೆ ಪ್ರಕಟ, ಷರತ್ತುಗಳಡಿ ನಡೆಯಲಿದೆ ಹಬ್ಬ ಆಚರಣೆ, ಇಲ್ಲಿದೆ ಕಂಪ್ಲೀಟ್ ಮಾಹಿತಿ
ಕಾರು ಚಾಲಕನ ನಿರ್ಲಕ್ಷ್ಯತನಕ್ಕೆ ಅಪಘಾತ
ಕಾರು ಚಾಲಕನೊಬ್ಬನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಚಾಲಕ ಮೊದಲು ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ತದನಂತರ, ಅಪೆ ಹಾಗೂ ಬುಲೆರೋಗೂ ಡಿಕ್ಕಿ ಹೊಡೆದಿದ್ದಾನೆ. ಈ ರೀತಿ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಈಸೂರು ಗ್ರಾಮದ ಹನುಮಂತಪ್ಪ (30) ಹಾಗೂ ಉಡುಗಣಿಯ ಮುಬಾರಕ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆತರಲಾಗಿದೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
https://www.suddikanaja.com/2021/08/23/accident-near-ayanur/