ಸುದ್ದಿ ಕಣಜ.ಕಾಂ | DISTRICT | SMET
ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯನ್ನು ಜೀವ ಉಳಿಸುವ ಮೂಲಕ ರೈಲ್ವೆ ಪೊಲೀಸರು ಭೇಷ್ ಎನಿಸಿಕೊಂಡಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಸಂಬಂಧಿಕರನ್ನು ತಾಳಗುಪ್ಪ- ಬೆಂಗಳೂರು ಇಂಟರ್ ಸಿಟಿ ರೈಲಿಗೆ ಕೂಡಿಸಿ ಹೋಗುವುದಕ್ಕಾಗಿ ಕೆಳಗೆ ಇಳಿಯಲು ಯತ್ನಿಸಿದ್ದಾರೆ. ಆಗ ಮಹಿಳೆಯು ಪ್ಲಾಟ್ ಫಾರಂನಲ್ಲಿ ಬಿದ್ದಿದ್ದು, ಅಲ್ಲಿಯೇ ಇದ್ದ ರೈಲ್ವೆ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ.
ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಚಲಿಸುತಿದ್ದ ರೈಲಿನಿಂದ ಕೆಳಗಿಳಿಯುವಾಗ ಅವಘಡ, ಮಹಿಳೆಯನ್ನು ರಕ್ಷಿಸಿದ ರೋಚಕ ದೃಶ್ಯಕ್ಕಾಗಿ ವಿಡಿಯೋ ನೋಡಿ (VIDEO REPORT)
READ | ಪವರ್ ಸ್ಟಾರ್ ಮುದ್ದಿಸಿದ ಆನೆ ಮರಿಗೆ `ಪುನೀತ್’ ಹೆಸರು ನಾಮಕರಣ
ತಾಳಗುಪ್ಪದಿಂದ ಶಿವಮೊಗ್ಗಕ್ಕೆ 6.55ಕ್ಕೆ ಬಂದಿದ್ದ ರೈಲು ಬೆಳಗ್ಗೆ 7.05ಕ್ಕೆ ಹೊರಟಿದೆ. ಆಗ ಮಹಿಳೆಯು ರೈಲಿನ ಒಳಗಡೆಯೇ ಇದ್ದರು. ರೈಲು ಹೊರಟಿರುವುದನ್ನು ಗಮನಿಸಿ ಕೆಳಗೆ ಇಳಿಯಲು ಯತ್ನಿಸಿದ್ದಾರೆ. ಅದಕ್ಕೆ ವ್ಯಕ್ತಿಯೊಬ್ಬರು ಸಹಕರಿಸಿದ್ದಾರೆ. ಆದರೆ, ರೈಲು ಹೊರಟಿದ್ದರ ವಿರುದ್ಧ ದಿಕ್ಕಿನಲ್ಲಿ ಪ್ಲಾಟ್ ಫಾರಂಗೆ ಇಳಿದಿದ್ದರಿಂದ ಆಯತಪ್ಪಿದೆ. ಹೀಗಾಗಿ, ಮಹಿಳೆಯು ಏಕಾಏಕಿ ಹಿಂದಕ್ಕೆ ಬಿದ್ದಿದ್ದಾಳೆ. ಇನ್ನೇನು ರೈಲಿಗೆ ಸಿಲುಕಬೇಕಿತ್ತು. ಅಷ್ಟರಲ್ಲಿ ಕರ್ತವ್ಯದ ಮೇಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಬಿ.ಎಸ್.ಸಂತೋಷ್, ಎಸ್.ಅಣ್ಣಪ್ಪ ಹಾಗೂ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್.ಪಿ.ಎಫ್) ಸಿಬ್ಬಂದಿ ಜಗದೀಶ್ ಅವರು ಪ್ರಾಣದ ಹಂಗು ತೊರೆದು ಮಹಿಳೆಯನ್ನು ರಕ್ಷಿಸಿದ್ದಾರೆ.
ವೈರಲ್ ಆಯ್ತು ವಿಡಿಯೋ
ತಾಳಗುಪ್ಪ-ಬೆಂಗಳೂರು ರೈಲಿನಿಂದ ಕೆಳಗಿಳಿಯುತ್ತಿದದ್ದ ಮಹಿಳೆ ಪ್ಲಾಟ್ ಫಾರಂನಲ್ಲಿ ಉರುಳಿಬಿದ್ದು ಆಕೆಯನ್ನು ರಕ್ಷಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಾರಿ ವೈರಲ್ ಆಗಿದೆ. ಘಟನೆ ನಡೆದ ಕೆಲವೇ ಹೊತ್ತಲ್ಲಿ ಟ್ವಿಟ್ಟರ್, ಫೇಸ್ಬುಕ್, ವಾಟ್ಸಾಪ್ ನಲ್ಲಿ ಶೇರ್ ಆಗಿದ್ದು, ಜನರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಶಾನ್ಯ ರೈಲ್ವೆ ಅಧಿಕಾರಿಗಳು ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
https://www.suddikanaja.com/2021/09/11/kodihalli-swamiji-predictions-about-two-years/