ಸುದ್ದಿ ಕಣಜ.ಕಾಂ | KARNATAKA | KUCHALAKKI
ಶಿವಮೊಗ್ಗ: ಕೇಂದ್ರ ಸರ್ಕಾರವು ಉತ್ತರ ಕನ್ನಡ, ದಕ್ಷಿಣ ಜಿಲ್ಲೆಗಳಲ್ಲಿ ಬೆಳೆಯಲಾಗುವ ಕುಚಲಕ್ಕಿ(kuchalakki)ಯನ್ನು ಪಡಿತರ ಕೇಂದ್ರ(ration shop)ದಲ್ಲಿ ವಿತರಣೆ ಮಾಡುವಂತೆ ಆದೇಶಿಸಿದೆ. ಬಡವರ ತುತ್ತಿನ ಚೀಲ ತುಂಬಿಸಲು ಪಡಿತರದ ಪಟ್ಟಿಗೆ ಕುಚಲಕ್ಕಿ ಸೇರ್ಪಡೆಯಾಗಿದೆ.
ಕುಚಲಕ್ಕಿಯನ್ನು ಪಡಿತರ ಕೇಂದ್ರಗಳಲ್ಲಿ ವಿತರಿಸಲು ಕೇಂದ್ರ ಸರ್ಕಾರ (central government) ನಿರ್ಧರಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (basavaraj bommai) ಹರ್ಷ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (narendra modi) ಅವರಿಗೆ ಅಭಿನಂದನೆಯನ್ನು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಣಯದಿಂದ ಸ್ಥಳೀಯ ಉತ್ಪನ್ನಗಳಿಗೆ (local product) ಮಾನ್ಯತೆ ನೀಡುವುದಲ್ಲದೇ ಅದಕ್ಕೆ ಬೆಂಬಲವನ್ನೂ ನೀಡಿದಂತಾಗಲಿದೆ ಎಂದು ಸಿಎಂ ಟ್ವೀಟ್ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.