ಸುದ್ದಿ ಕಣಜ.ಕಾಂ | CITY | WEEKEND CURFEW
ಶಿವಮೊಗ್ಗ: ನಗರದ ಗಾಂಧಿ ಬಜಾರ್ನಲ್ಲಿ ಮಾಸ್ಕ್ ಧರಿಸದೇ ಬಂದ ಜನರನ್ನು ಹಿಡಿದು ದಂಡ ವಿಧಿಸುತ್ತಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಜನರೇ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಜನರು ಒಕ್ಕೊರಳಿನಿಂದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಅವರು ಪರಾರಿಯಾಗಿದ್ದಾರೆ.
ಭಾನುವಾರ ದಿನಸಿ, ತರಕಾರಿಗಳನ್ನು ಖರೀದಿಸುವುಕ್ಕಾಗಿ ಗಾಂಧಿ ಬಜಾರಿಗೆ ಬಂದಿದ್ದ ಜನರನ್ನು ತಡೆದು ಪಾಲಿಕೆಯ ಅಧಿಕಾರಿಗಳು ದಂಡ ಹೇರುತ್ತಿದ್ದರು. ಅಧಿಕಾರಿಗಳ ನಡೆಯ ವಿರುದ್ಧ ಜನರು ಗರಂ ಆಗಿದ್ದು, ಅನಿವಾರ್ಯವಾಗಿ ಅಧಿಕಾರಿಗಳು ಸುಮ್ಮನೆ ಹೋದರು.