ಸುದ್ದಿ ಕಣಜ.ಕಾಂ | DISTRICT | DC TRANSFER
ಶಿವಮೊಗ್ಗ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಜಿಲ್ಲೆಗೆ ಹೊಸ ಡಿಸಿಯಾಗಿ ಡಾ.ಸೆಲ್ವಮಣಿ ಅವರನ್ನು ಸರ್ಕಾರ ನಿಯೋಜಿಸಿ ಆದೇಶಿಸಿದೆ.
ಕೆ.ಎ.ದಯಾನಂದ್ ಅವರು ವರ್ಗಾವಣೆ ಬಳಿಕ ಶಿವಕುಮಾರ್ ಅವರು ಶಿವಮೊಗ್ಗದ ಡಿಸಿಯಾಗಿ ಬಂದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಕೋವಿಡ್, ಅಧಿಕ ಮಳೆಯಿಂದಾಗಿ ಜಲಪ್ರವಾಹ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸಿದ್ದರು. ಇವೆಲ್ಲವುಗಳ ನಡುವೆಯೂ ಜಿಲ್ಲೆಯಲ್ಲಿ ಸಾಕಷ್ಟು ಕೆಲಸಗಳನ್ನು ಇವರು ಮಾಡಿದ್ದಾರೆ.
ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಡಾ.ಸೆಲ್ವಮಣಿ ಅವರನ್ನು ಶಿವಮೊಗ್ಗಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ಸೆಲ್ವಮಣಿ ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ.