ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ಅಡಿಕೆ ಚೇಣಿ ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದಕ್ಕೆ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ.
ತಾಲೂಕಿನ ಸಂತೇಹಕ್ಲು ಗ್ರಾಮದ ಪುರಲುಕೊಪ್ಪದ ಮಂಜುನಾಥ್ (46) ಎಂಬುವವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅದನ್ನು ಕಂಡ ಪತ್ನಿ ಉಷಾ (40) ಆತಂಕಗೊಂಡು ನೇಣು ಹಾಕಿಕೊಂಡಿದ್ದಾರೆ.
1 ಎಕರೆ ಜಮೀನಿದ್ದು, ಐದಾರು ವರ್ಷಗಳಿಂದ ಅಡಿಕೆ ಚೇಣಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಆರ್ಥಿಕ ನಷ್ಟವನ್ನು ಅನುಭವಿಸಿದ್ದರು. ಮಂಜುನಾಥ್ ಅವರು ಬೆಳಗ್ಗೆ ಎದ್ದು ಪತ್ನಿ ಮತ್ತು ಕೆಲಸದಲ್ಲಿದ್ದವರನ್ನು ಎಬ್ಬಿಸಿದ್ದಾರೆ. ಹಂಡೆಗೆ ಬೆಂಕಿ ಕೂಡ ಹಚ್ಚಿದ್ದಾರೆ. ನಂತರ, ಉಪ್ಪರಗೆಗೆ ಹೋಗಿ ನೇಣು ಬಿಗಿದುಕೊಂಡಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.