ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಅನುಪಿನಕಟ್ಟೆ ರಸ್ತೆಯಲ್ಲಿರುವ ಸ್ಮಶಾನದ ಎದುರಿನ ತೆಂಗಿನ ತೋಟದಲ್ಲಿ 4 ಜನರು ಗಾಂಜಾ ಮಾರಾಟ (ganaja sale) ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಕೆಳಗಿನ ತುಂಗಾನಗರದ ತಪ್ಪಣ್ಣ ಅಲಿಯಾಸ್ ಮಹಮ್ಮದ್ ತಬರಕ್ ವುಲ್ಲಾ (21), ಗೆಜ್ಜೆನಹಳ್ಳಿಯ ಕೃಷ್ಣ ಅಲಿಯಾಸ್ ಗೇಟ್ (24), ದಾವಣಗೆರೆ ಜಿಲ್ಲೆಯ ಚನ್ನಗಿರಿಯ ನಿವಾಸಿಗಳಾದ ರುದ್ರೇಶ್ (35), ರಮೇಶ್ (25) ಎಂಬುವವರನ್ನು ಬಂಧಿಸಲಾಗಿದೆ.
ಗಾಂಜಾ ಮಾರಾಟ ಹಾಗೂ ಸೇವನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಶಿವಮೊಗ್ಗ ಗ್ರಾಮಾಂತರ ಠಾಣೆ (shivamogga rural police station) ಪಿಎಸ್ಐ, ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡ(special team) ವನ್ನು ರಚಿಸಲಾಗಿದ್ದು, ಅವರಿಗೆ ಶುಕ್ರವಾರ ಬಂದ ಖಚಿತ ಮಾಹಿತಿ ಅನ್ವಯ ಕಾರ್ಯಾಚರಣೆ ಮಾಡಲಾಗಿದೆ.
ಆರೋಪಿಗಳ ಬಳಿಯಿಂದ ಅಂದಾಜು 52,000 ರೂಪಾಯಿ ಮೌಲ್ಯದ ಒಟ್ಟು 1 ಕೆಜಿ 405 ಗ್ರಾಂ ಗಾಂಜಾ, 4,200 ರೂಪಾಯಿ ನಗದು, 5 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ 2 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
https://www.suddikanaja.com/2021/09/05/tried-for-theft-in-kuvempu-nagar/