ಸುದ್ದಿ ಕಣಜ.ಕಾಂ | CITY | KERE HABBA
ಶಿವಮೊಗ್ಗ: ಶಿವಮೊಗ್ಗ ಪರಿಸರಾಸಕ್ತರ ತಂಡದಿಂದ ನಿರ್ಮಾಣಗೊಂಡ ಮಲ್ಲಿಗೇನಹಳ್ಳಿ ವಾಜಪೇಯಿ ಬಡಾವಣೆಯ ಕ್ಯಾದಿಗೆಕಟ್ಟೆ ಕೆರೆ ಆವರಣದಲ್ಲಿ `ಕೆರೆ ಹಬ್ಬ’ ಮತ್ತು ತುಳಸಿಗೌಡ ಉದ್ಯಾನವನ್ನು ಪದ್ಮಶ್ರೀ ಪುರಸ್ಕೃತೆ ತುಳಸಿಗೌಡ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸದ ಬಿ.ವೈ.ರಾಘವೇಂದ್ರ ಅವರು ಕ್ಯಾದಿಗೆಕೆರೆ ನಿರ್ವಹಣೆಗೆ ತಲಾ 2 ಲಕ್ಷ ರೂ. ಸಹಾಯ ಧನ ಮಾಡಿದರು.
ಕೆರೆಗೆ ಗಂಗಾ ಪೂಜೆ, ಮೀನಿನ ಮರಿಗಳ ಸಪರ್ಮಣೆ, ಪದ್ಮಶ್ರೀ ಪುರಸ್ಕøತ ತುಳಸಿಗೌಡ ಉದ್ಯಾನ ಲೋಕಾರ್ಪಣೆ ಕಾರ್ಯಕ್ರಮ ನಡೆದವು. ಬಸವಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ, ಹೊಸನಗರದ ಮೂಲೆಗದ್ದೆ ಅಭಿನವ ಚೆನ್ನಬಸವ ಸ್ವಾಮೀಜಿ, ಪರಿಸರ ಚಿಂತಕ ಪ್ರೊ.ಬಿ.ಎಂ.ಕುಮಾರಸ್ವಾಮಿ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಎಸ್.ಚಂದ್ರಶೇಖರ್, ಭಾರತಿ ಚಂದ್ರಶೇಖರ್ ತ್ಯಾಗರಾಜ್ ಮಿತ್ಯಂತ, ಉಮೇಶ್, ಅನಿಲ್ ಶೆಟ್ಟರ್ ಉಪಸ್ಥಿತರಿದ್ದರು.