ಸುದ್ದಿ ಕಣಜ.ಕಾಂ | DISTRCT | SHIVAMOGGA POLICE
ಶಿವಮೊಗ್ಗ: ಜಿಲ್ಲೆಯಲ್ಲಿ ಅಪರಾಧ ತಡೆಗೆ ಪೊಲೀಸ್ ಇಲಾಖೆ ಹಲವು ಮಾಸ್ಟರ್ ಪ್ಲ್ಯಾನ್ ಗಳನ್ನು ಹೊಂದಿದೆ. ಅವುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ (district superintendent of police) ಬಿ.ಎಂ.ಲಕ್ಷ್ಮೀಪ್ರಸಾದ್ (BM Lakshmi Prasad) ಅವರು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ನಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿ ಮಾಡಲಾಗುವುದು ಎಂದರು.
ಠಾಣೆಗೆ ಬರುವ ದೂರುದಾರರೊಂದಿಗೆ ಪೊಲೀಸರು ಹೇಗೆ ವರ್ತಿಸಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುವುದು. ಸಮುದಾಯದ ಸಹಭಾಗಿತ್ವದಲ್ಲಿ ಅಪರಾಧ ತಡೆಗೆ ಪ್ರಯತ್ನ ಮಾಡಲಾಗುವುದು. ಡಿ.ಎ.ಆರ್ ಗೆ ಜಲಾಶಯಗಳ ನಿರ್ವಹಣೆ ಜವಾಬ್ದಾರಿ ವಹಿಸಲಾಗಿತ್ತು. ಆದರೆ, ಈಗ ಡ್ಯಾಂಗಳ ಜವಾಬ್ದಾರಿಯನ್ನು ಕೆ.ಎಸ್.ಐ.ಸಿ.ಎಫ್ ಗೆ ವಹಿಸಲಾಗಿದೆ. ಹೀಗಾಗಿ, ಇಲಾಖೆಯ ಮೇಲಿನ ಹೊರೆ ಸ್ವಲ್ಪ ಇಳಿಕೆ ಆಗಲಿದೆ ಎಂದು ತಿಳಿಸಿದರು. ಸಂವಾದದಲ್ಲಿ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಯಡಗೆರೆ ಉಪಸ್ಥಿತರಿದ್ದರು.
Plan No 1 | ಗಾಂಜಾ ಮಾರಾಟದ ಮೋಡಸ್ (modus) ಬದಲಾಗಿದೆ. ಪರಿಚಯವಿದ್ದವರು ಫೋನ್ ಕಾಲ್ ಮಾಡಿದರೆ ಅಂತವರಿಗೆ ಮಾತ್ರ ಗಾಂಜಾ (ganja) ಪೂರೈಕೆಯಾಗುತ್ತಿದೆ. ಗಾಂಜಾ ಪೆಡ್ಲರ್ (ganja peddlers) ಹಾಗು ವ್ಯಸನಿ(Addiction)ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆಂಧ್ರ ಪ್ರದೇಶದಿಂದ ಪೂರೈಕೆಯಾಗುತ್ತಿದ್ದ ಗಾಂಜಾದ ಮೇಲೆ ಪೊಲೀಸರು ನಿಯಂತ್ರಣ ಸಾಧಿಸಿದ್ದಾರೆ. ಆದರೂ ಗಾಂಜಾ ಬಳ್ಳಾರಿ(bellary), ಚೆನ್ನಗಿರಿ(chennagiri), ತರೀಕೆರೆ(tarikere)ಯಂತ ಹೊರವಲಯದಲ್ಲಿ ಒಂದು ಅಥವಾ ಎರಡು ಕೆಜಿಯ ಪ್ಯಾಕ್ ನಲ್ಲಿ ಬರುತ್ತಿದೆ. ಮೊದಲು ಗಾಂಜಾ ವ್ಯಸನಿಗಳನ್ನು ಪರೀಕ್ಷಿಸಿದಾಗ 10 ಕೇಸ್ ಗಳಲ್ಲಿ 6-7 ಕೇಸ್ ಗಳಲ್ಲಿ ಸೇವನೆ ಖಾತರಿಯಾಗ್ತಿತ್ತು. ಈಗ ಒಂದೆರೆಡು ಕೇಸ್ ಗಳು ಸಿಕ್ಕರೂ ಹೆಚ್ಚು. ಈ ವರ್ಷ ಗಾಂಜಾ ಎಕ್ಸೈಸ್, ಮಟ್ಕಾ ನಿಯಂತ್ರಣದ ಮೇಲೆ ಹೆಚ್ಚಿನ ಒತ್ತು ನೀಡಲಾಗುವುದು. ಹಳ್ಳಿ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಶೇ.80ರಷ್ಟು ಮದ್ಯ ಮಾರಾಟವನ್ನು ಕಡಿಮೆ ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದೇವೆ. ಎಲ್ಲಿವರೆಗೆ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಇರುತ್ತೋ, ಅಲ್ಲಿಯವರೆಗೆ ಅಪರಾಧ ಸಂಖ್ಯೆ ಹೆಚ್ಚಳವಾಗುತ್ತದೆ.
Plan No 2 | ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆಯನ್ನು 2019-20 ಕ್ಕೆ ಹೋಲಿಸಿದರೆ, ಈಗ ಶೇ.20 ರಷ್ಟು ಕಡಿಮೆಯಾಗಿದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆಗೂಡಿ ಅಪಘಾತ ವಲಯಗಳನ್ನು ಗುರುತಿಸಿ, ಎಲ್ಲೆಲ್ಲಿ ಹಂಪ್ಸ್ ಬ್ಯಾರಿಕೇಡ್ ಗಳನ್ನು ಹಾಕಬೇಕೆಂದು ಚಾರ್ಟ್ ಸಿದ್ದಪಡಿಸಲಾಗಿದೆ.
Plan No 3 | ಶಾಲಾ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತುಕೊಳ್ಳಲು ಶಿಕ್ಷಕರ ಜೊತೆಗೂಡಿ ಪೊಲೀಸ್ ಕಾರ್ಯನಿರ್ವಹಣೆ. ಈಗಾಗಲೇ ವಾಟ್ಸಾಪ್ ಗ್ರೂಪ್ (whatsapp group) ಮಾಡಿದ್ದು, ಶಾಲೆ ಮತ್ತು ಕಾಲೇಜುಗಳಲ್ಲಿ ಸೆಕ್ಯುರಿಟಿಗೆ ಹೆಚ್ಚಿನ ಒತ್ತು
Plan No 4 | ಪೊಲೀಸರ ಬಗ್ಗೆ ಈಗಿರುವ ಇಮೇಜ್ ಅನ್ನು ಇನ್ನು ಹತ್ತು ಪಸೆರ್ಂಟ್ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಸಮಾಜದಲ್ಲಿ ಕಾರ್ಮಿಕರು, ವರ್ತಕರು ಹಣ್ಣು ಮಾರುವವರು, ಆಟೋ ಚಾಲಕರು ಸೇರಿದಂತೆ ಎಲ್ಲ ವರ್ಗದವರು ಹೊಂದಿರುವ ವಾಟ್ಸಾಪ್ ಗ್ರೂಪ್ ಗಳಿಗೆ ಪೊಲೀಸ್ ಅಧಿಕಾರಿಗಳನ್ನು ಸೇರಿಸಿ, ಗ್ರೂಪ್ ಗಳಲ್ಲಿ ಪೊಲೀಸರಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅದನ್ನು ಹೇಗೆ ಬಗೆಹರಿಸಬೇಕೆಂಬ ಪ್ರಯತ್ನ ಶುರುವಾಗಿದೆ.
Plan No 5 | ಪೊಲೀಸ್ ಠಾಣೆಗಳಿಗೆ ಬರುವ ಸಾರ್ವಜನಿಕರನ್ನು ಅಧಿಕಾರಿ ಸಿಬ್ಬಂದಿ ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲರಿಗೂ ತರಬೇತಿ ನೀಡಲಾಗುವುದು. ಠಾಣೆಗಳಿಗೆ ಬರುವವರು ಎಂತೆಂತಾ ದೂರುಗಳನ್ನು ಇಟ್ಟುಕೊಂಡು ಬರುತ್ತಾರೆ, ಠಾಣೆಗೆ ಬರುವ ಮಕ್ಕಳು ಮಹಿಳೆಯು ವಯೋವೃದ್ಧರೊಂದಿಗೆ ಹೇಗೆ ವರ್ತಿಸಬೇಕೆಂಬ ಬಗ್ಗೆ ತರಬೇತಿ ನೀಡಲಾಗುವುದು.
Plan No 6 | ಬೀಟ್ ಸಿಸ್ಟಮ್ ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹಳ್ಳಿಗಳಲ್ಲಿ ಬೀಟ್ (beat)ಗೆ ಹೋಗುವ ಕ್ರೈಂ ಪೊಲೀಸರಿಗೆ ಹಳ್ಳಿಯ ಸಮಗ್ರ ಮಾಹಿತಿ ಇರಬೇಕು. ಕಳ್ಳರು ರೌಡಿಗಳು ಸಮಾಜದ ಗಣ್ಯ ವ್ಯಕ್ತಿಗಳ ಅರಿವು ಪೊಲೀಸಿಗಿರಬೇಕು. ಇನ್ನು ಆರು ತಿಂಗಳಲ್ಲಿ ಪರಣಾಮಕಾರಿಯಾಗಿ ಜಾರಿ ಮಾಡಲಾಗುವುದು.
Plan No 7 | ಪಾಸ್ ಪೋರ್ಟ್ ವೆರಿಫಿಕೇಷನ್ (passport verification), ಉದ್ಯೋಗ ಇತರೆ ಸರ್ಕಾರಿ ಕೆಲಸಗಳಿಗಾಗಿ ಪೊಲೀಸ್ ವೆರಿಫಿಕೇಷನ್ ( police verification)ಗೆ ಬರುವ ಅರ್ಜಿಗಳ ವಿಳಂಬವನ್ನು ಶೇ. 50 ರಷ್ಟು ಕಡಿಮೆ ಮಾಡಬೇಕೆಂಬ ಗುರಿ ಹೊಂದಲಾಗಿದೆ.
Plan No 8 | ಮಟ್ಕಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಕೆಪಿ ಆಕ್ಟ್ ನಲ್ಲಿ 66 ಕೇಸ್ ನಲ್ಲಿ 42 ಅರೆಸ್ಟ್ ಜೈಲಿಗೆ ಕಳುಹಿಸಲಾಗಿದೆ. ಮಟ್ಕಾ ಕೇಸನ್ನು ಹೆಚ್ಚಿಸಲಾಗುವುದು.
Plan No 9 | ಸಮಾಜದಲ್ಲಿ ವಿವಿಧ ಸಂದರ್ಭಗಳಲ್ಲಿ ನಡೆಯುವ ಅವಘಡಗಳನ್ನು ಕೋಮುಗಲಭೆಗಳನ್ನು ಪೊಲೀಸರು ಹೇಗೆ ಎದುರಿಸಬೇಕೆಂಬುದನ್ನು ಪೊಲೀಸರಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಲು ಉದ್ದೇಶಿಸಲಾಗಿದೆ
Plan No 10 | ವಾಹನ ಅಪಘಾತಗಳನ್ನು ಈ ಬಾರಿ ಶೇ.10 ರಷ್ಟು ಕಡಿಮೆ ಮಾಡುವ ಯೋಜನೆ ಇದೆ. ರಾಬರಿ ಕಳ್ಳತನದಂತಹ ಅಪರಾಧಗಳನ್ನು ಶೇ.10ರಷ್ಟು ಕಡಿಮೆ ಮಾಡಲಾಗುವುದು. ಪ್ರಾಪರ್ಟಿ ರಿಕವರಿ ಪ್ರಸ್ತುತ ಶೇ.45 ಇದ್ದು ಅದನ್ನು 55ಕ್ಕೆ ಏರಿಕೆ. ಸ್ಟೇಷನ್ ಆವರಣದಲ್ಲಿರುವ ಜಪ್ತಿ ಮಾಡಿರುವ ವಾಹನಗಳನ್ನು ಒಂದೆಡೆ ವಿಲೇವಾರಿ ಮಾಡಿ ಸ್ಟೇಷನ್ ನ್ನು ಕ್ಲೀನ್ ಮಾಡುವ ಉದ್ದೇಶ.
Plan No 11 | ಅಪರಾಧ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಾಗಿದೆ. ಗೃಹ ಸಚಿವರು ಈ ಬಗ್ಗೆ ಪ್ರಸ್ತಾಪಿಸಿದ್ದು, ಶಿಕ್ಷೆ ಪ್ರಮಾಣವನ್ನು ಈಗಿರುವುದಕ್ಕಿಂತ ದುಪ್ಪಟ್ಟು ಮಾಡಲು ಉದ್ದೇಶಿಸಲಾಗಿದೆ. ಅಪಘಾತ ಪ್ರಕರಣಗಳಲ್ಲಿ ಹಾಗೂ ಅಪರಾಧ ಪ್ರಕಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸಲು ಕ್ರಮ
https://www.suddikanaja.com/2021/08/10/home-minister-aaraga-jnanendra-meeting-with-police-officials/