ಸುದ್ದಿ ಕಣಜ.ಕಾಂ | NATIONAL NEWS | UNION BUDGET
ನವದೆಹಲಿ: ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಔಪಚಾರಿಕ ಒಪ್ಪಿಗೆಯ ನಂತರ ಸಂಸತ್ ನಲ್ಲಿ 2022-23ನೇ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಎಲ್ಲರನ್ನೂ ಒಳಗೊಂಡ ಬಜೆಟ್ ಇದಾಗಿದ್ದು, ಕೃಷಿ, ಶಿಕ್ಷಣ, ಉದ್ಯಮ, ಉದ್ಯೋಗ, ಜೀವನವನ್ನು ಇನ್ನಷ್ಟು ಸ್ಮಾರ್ಟ್ ಆಗಿಸುವ ಹೀಗೆ ಹತ್ತು ಹಲವು ವಿಚಾರಗಳನ್ನು ಬಜೆಟ್ ನಲ್ಲಿ ಮಂಡಿಸಿದ್ದಾರೆ. ಅವುಗಳ ಹೈಲೈಟ್ಸ್ ಇಲ್ಲಿದೆ.
READ | ಎಸ್ಸೆಸ್ಸೆಲ್ಸಿ ಪಾಸ್ ಆದವರಿಗೆ ಕೆಸಿಸಿ ಬ್ಯಾಂಕ್ ನಲ್ಲಿ ಉದ್ಯೋಗ, ಆಕರ್ಷಕ ಸಂಬಳ, ಈಗಲೇ ಅರ್ಜಿ ಸಲ್ಲಿಸಿ
2022 ಕೇಂದ್ರ ಬಜೆಟ್ ಹೈಲೈಟ್ಸ್
- ಜಮೀನು ನೋಂದಣಿ ಡಿಜಿಟಲೀಕರಣಕ್ಕೆ ಒನ್ ನೇಷನ್ ಒನ್ ರೆಜಿಸ್ಟ್ರೇಷನ್ ಜಾರಿ. ದೇಶದ 8 ಭಾಷೆಗಳಲ್ಲಿ ಏಕ ರೂಪದ ಆಸ್ತಿ ನೋಂದಣಿ ವ್ಯವಸ್ಥೆ
- ಎಂಎಸ್.ಎಂಇಗಳಿಗೆ 6 ಕೋಟಿ ರೂಪಾಯಿ ನೀಡಿಕೆ. ಉದ್ಯಮಗಳ ನೋಂದಣಿಗೆ ಏಕ ಗವಾಕ್ಷಿ ಪದ್ಧತಿ
- ನಗರ ಮೂಲಸೌಕರ್ಯಗಳ ಅಭಿವೃದ್ಧಿಗೆ ಯೋಜನೆ
- ಹೈಲೆವಲ್ ಅರ್ಬನ್ ಕಮಿಟಿ ಸ್ಥಾಪನೆ
- ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಗಾಗಿ 5ಜಿ ತರಂಗಾತ ಹರಾಜು, 2022ರಿಂದಲೇ 5 ಸೇವೆ ಲಭ್ಯ
- ಗುತ್ತಿಗೆದಾರರ ಇ ಬಿಲ್ ಸ್ಕೀಮ್ ಜಾರಿ
- ದೇಶದ ಪ್ರತಿ ಹಳ್ಳಿಗಳಿಗೆ ಒಎಫ್ಸಿ (ಆಪ್ಟಿಕಲ್ ಫೈಬರ್) ವ್ಯವಸ್ಥೆ
- ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ, ವಿಮಾನಯಾನ ಏರಿಕೆ ಸಾಧ್ಯತೆ
- DRDO ಜೊತೆ ಸ್ಥಳೀಯ ಕಂಪನಿಗಳ ಸಹಭಾಗಿತ್ವದಲ್ಲಿ ರಕ್ಷಣಾ ಇಲಾಖೆಯಲ್ಲಿ ಶೇ.68ರಷ್ಟು ಸ್ಥಳೀಯವಾಗಿ ಖರೀದಿ
- ಭಾರತ್ ನೆಟ್ ಯೋಜನೆ 2025ರೊಳಗೆ ಪೂರ್ಣ
- ಯುವಪೀಳಿಗೆ ಸಂಶೋಧನೆಗೆ ಒತ್ತು
- ಸೋಲಾರ್ ವಿದ್ಯುತ್ ಉತ್ಪಾದನೆಗೆ 19,500 ಕೋಟಿ ರೂ. 10 ವಲಯಗಳಲ್ಲಿ ಕ್ಲೀನ್ ಎನರ್ಜಿ ಯೋಜನೆ ಜಾರಿ, 2023ರೊಳಗೆ 280 ಗಿಗಾ ವ್ಯಾಟ್ ಸೋಲಾರ್ ಶಕ್ತಿ ಉತ್ಪಾದನೆ ಯೋಜನೆ ಗುರಿ
- ಎಸ್ಸಿ, ಎಸ್ಟಿ ರೈರಿಗೆ ಆರ್ಥಿಕ ನೆರವು
- ದೇಶದಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು. ನಗರ ಪ್ರದೇಶಗಳಲ್ಲಿ ಬ್ಯಾಟರಿ ಬದಲಾವಣೆ ಕೇಂದ್ರ
- ಹೊಸ ತಂತ್ರಜ್ಞಾನಗಳೊಂದಿಗೆ ಚಿಪ್ ಒಳಗೊಂಡ ಇ-ಪಾಸ್ ಪೋರ್ಟ್ ಮುಂದಿನ ವರ್ಷದಿಂದ ಲಭ್ಯ
- ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 48 ಕೋಟಿ ರೂಪಾಯಿ
- ಹರ್ ಘರ್ ನಲ್ ಜಲ್ ಯೋಜನೆಗೆ 60 ಸಾವಿರ ಕೋಟಿ ರೂ. ಈ ಯೋಜನೆ ಅಡಿ ದೇಶದ 3.8 ಕೋಟಿ ಮನೆಗಳಿಗೆ ನೀರು
- ದೇಶದ 2 ಲಕ್ಷ ಅಂಗನವಾಡಿಗಳು ಮೇಲ್ದರ್ಜೆಗೇರಿಸಲು ಕ್ರಮ
- ಪ್ರಧಾನಿ ಇ ವಿದ್ಯಾ ಯೋಜನೆ ಅಡಿಯಲ್ಲಿ 200 ಟಿವಿ ಚಾನಲ್ ಗಳ ಮೂಲಕ 1ರಿಂದ 12ನೇ ತರಗತಿವರೆಗೆ ಒನ್ ಕ್ಲಾಸ್, ಒನ್ ಟಿವಿ ಚಾನಲ್ ಜಾರಿ
- ವಿಶ್ವದರ್ಜೆಯ ಡಿಜಿಟಲ್ ಯುನವರ್ಸಿಟಿ ಸ್ಥಾಪನೆಗೆ ಕ್ರಮ
- ಶೂನ್ಯ ಬಂಡವಾಳ, ನೈಸರ್ಗಿಕ ಕೃಷಿಗೆ ಆದ್ಯತೆ
- ಕನಿಷ್ಠ ಬೆಂಬಲ ಬೆಲೆ ಯೋಜನೆಗೆ 2.87 ಕೋಟಿ ರೂ. ಮೀಸಲು
- 2023ರ ಅಂತರ ರಾಷ್ಟ್ರೀಯ ಸಿರಿ ಧಾನ್ಯ ವರ್ಷವೆಂದು ಘೋಷಣೆ
- ಸಾರಿಗೆ ಮೂಲಸೌಕರ್ಯ ಹೆಚ್ಚಿಸಲು 20 ಸಾವಿರ ಕೋಟಿ ರೂ. ಮೀಸಲು
- ಮುಂದಿನ 3 ವರ್ಷದಲ್ಲಿ 400 ವಂದೇ ಭಾರತ್ ಹೊಸ ರೈಲುಗಳ ಆರಂಭ
https://www.suddikanaja.com/2021/03/08/karnataka-state-budget-cm-bsy-announcemany-scheme-to-shivamogga/