ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಸಿ.ಎಂ ಇಬ್ರಾಹಿಂ ಸಹೋದರ ಸಿ.ಎಂ ಖಾದರ್ ಅವರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.
ಭದ್ರಾವತಿ ನಗರದ ಅಮೀರ್ ಜಾನ್ ಕಾಲೋನಿಯಲ್ಲಿರುವ ಮನೆಯಲ್ಲಿ ₹23.35 ಲಕ್ಷ ಮೌಲ್ಯದ ಕಳ್ಳತನ ಮಾಡಲಾಗಿದ್ದು, ಖಾದರ್ ಅವರು ತಮ್ಮ ಕುಟುಂಬದೊಂದಿಗೆ ದುಬೈಗೆ ಹೋದಾಗ ಘಟನೆ ನಡೆದಿದೆ.
READ | ಶಿವಮೊಗ್ಗದ ಸೆಂಟ್ರಲ್ ಜೈಲಿನೊಳಗೆ ಗಾಂಜಾ ಎಸೆಯುತ್ತಿದ್ದ ಮೂವರು ಅರೆಸ್ಟ್
ಫೆಬ್ರವರಿ 5ರಂದು ಖಾದರ್ ದುಬೈಗೆ ತೆರಳಿದ್ದರು. ಈ ವೇಳೆ ಅವರ ಕಾರಿನ ಚಾಲಕ ಕೇಶವ್, ವ್ಯವಹಾರಿಕ ಕಚೇರಿ ಸಿಬ್ಬಂದಿ ಮುಬಾರಕ್ ಅವರು ಮನೆಯ ಜವಾಬ್ದಾರಿ ನೋಡಿಕೊಳ್ಳುತಿದ್ದರು. ಫೆ.13ರಂದು ಕೇಸವ್ ಅವರು ಮನೆಗೆ ಬಂದು ನೋಡಿದಾಗ ಕಿಟಕಿಯ ಗ್ರಿಲ್ ಕೆಳಗೆ ಬಿದ್ದಿತ್ತು. ಹಿಂಬಾಗಿಲು ತೆರೆದಿತ್ತು. ತಕ್ಷಣ ದುಬೈನಲ್ಲಿದ್ದ ಖಾದರ್ ಗೆ ಕಳ್ಳತನದ ವಿಚಾರ ಫೋನ್ ಮಾಡಿ ತಿಳಿಸಲಾಗಿದೆ. ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.