ಸುದ್ದಿ ಕಣಜ.ಕಾಂ | CITY | SCHOOL COLLEGE REOPEN
ಶಿವಮೊಗ್ಗ: ಬಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ ನಂತರ ಉಂಟಾದ ಗಲಾಟೆಯಿಂದಾಗಿ ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ, ಈಗ ನಗರ ಹಸಜ ಸ್ಥಿತಿ ಮರಳಿದ್ದು, ಶನಿವಾರದಿಂದ ಶಾಲೆ ಕಾಲೇಜು ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ.
ಕಫ್ರ್ಯೂ ಶನಿವಾರ ಬೆಳಗ್ಗೆ ಅಂತ್ಯಗೊಳ್ಳಲಿದ್ದು, ಅಲ್ಲಿಯವರೆಗೆ ನಗರ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿ ಇರಲಿವೆ.