ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಭಜರಂಗ ದಳ ಕಾರ್ಯಕರ್ತ ಹರ್ಷ ಕೊಲೆಗೆ ಎರಡು ಕಾರುಗಳನ್ನು ಬಳಸಲಾಗಿತ್ತು. ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡೂ ಕೊಲೆ ಮಾಡುವುದಕ್ಕೆ ಒಂದು ಹಾಗೂ ಎಸ್ಕೇಪ್ ಆಗುವುದಕ್ಕೆ ಮತ್ತೊಂದು ಕಾರನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ.
READ | ಜಿಲ್ಲಾಡಳಿತ ಪರಿಷ್ಕೃತ ಆದೇಶ, ಶಿವಮೊಗ್ಗದಲ್ಲಿ ಮತ್ತೆ ಕರ್ಫ್ಯೂ ವಿಸ್ತರಣೆ, ನಿಬಂಧನೆಗಳೇನು?
ವಿಚಾರಣೆಗಾಗಿ 10 ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸ್
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹತ್ತು ಜನರನ್ನು ಬಂಧಿಸಲಾಗಿದೆ. ಅವರನ್ನು ವಿಚಾರಣೆ ಮಾಡುವುದಕ್ಕೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಕೊಲೆ ಮಾಡಲು ಬಳಸಿದ್ದ ಕಾರು ಹಾಗೂ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ವಿಶೇಷವೆಂದರೆ ಕಾರುಗಳು ಬೇರೆ ರಾಜ್ಯದ್ದಾಗಿದ್ದು, ಅವುಗಳ ಮಾಲೀಕರು ಯಾರು, ಕಾರು ಇಲ್ಲಿಗೆ ಹೇಗೆ ಬಂತು ಈ ವಿಚಾರಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಹರ್ಷನ ಮೊಬೈಲ್ ಇದುವರೆಗೆ ಪತ್ತೆಯಾಗಿಲ್ಲ. ಆದರೆ, ವಿಡಿಯೋ ಕಾಲ್ ಮಾಡಿದರು ಎನ್ನಲಾದವರ ಬಗ್ಗೆ ಮಾಹಿತಿ ಲಭಿಸಿದೆ. ಅವರಿಗೂ ಕೊಲೆಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ.