ಸುದ್ದಿ ಕಣಜ.ಕಾಂ | DISTRICT | HARSHA MURDER CASE
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹತ್ಯೆಯಾದ ಭಜರಂಗ ದಳದ ಕಾರ್ಯಕರ್ತ ಹರ್ಷನ ಮನೆಗೆ ಭಾನುವಾರ ಭೇಟಿ ನೀಡಿ ಸಾಂತ್ವನ ನೀಡಿದರು. ನಂತರ, ಸರ್ಕಾರದಿಂದ ಘೋಷಣೆಯಾದ 25 ಲಕ್ಷ ರೂಪಾಯಿ ಚೆಕ್ ನೀಡಿದರು. ಈ ವೇಳೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಇತರರು ಉಪಸ್ಥಿತರಿದ್ದರು.
READ | ಪೊಲೀಸ್ ಇಲಾಖೆ ಮಹತ್ವದ ಪ್ರಕಟಣೆ
ಯಡಿಯೂರಪ್ಪ ಹೇಳಿದ್ದೇನು?
- ಹರ್ಷ ಅವರ ಕೊಲೆ ಆರೋಪಿಗಳಿಗೆ ಮರಣ ದಂಡನೆಯನ್ನು ವಿಧಿಸ/ಬೇಕು. ಯಾವುದೇ ಕಾರಣಕ್ಕೂ ಜೈಲಿನಿಂದ ಹೊರಗಡೆ ಬರಬಾರದು. ಈ ಬಗ್ಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲಾಗಿದೆ.
- ಸಮಾಜದಲ್ಲಿ ಎಲ್ಲ ಧರ್ಮೀಯರು ಸಹಬಾಳ್ವೆಯಿಂದ ಬದುಕಬೇಕು. ಯಾವುದೇ ಕಾರಣಕ್ಕೂ ಯಾವ ಸಮುದಾಯದವರೂ ಉದ್ರೇಕರಾಗದೇ ಸಮಾಧಾನದಿಂದ ಇರಬೇಕು. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸೆಗೆ ಧಕ್ಕೆ ತರಬಾರದು.
- ಹರ್ಷನ ಸಾವು ಖಂಡನೀಯವಾಗಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕುಟುಂಬದ ಸದಸ್ಯರಿಗೆ ಸಾಂತ್ವನದ ಹೊರತು ಮತ್ತೇನೂ ಹೇಳಲಾಗದು.
https://www.suddikanaja.com/2022/02/26/bajaranga-dal-activist-harsha-murdered-brutally-in-shivamogga-swamijis-visited-harshas-house/