ಸುದ್ದಿ ಕಣಜ.ಕಾ | TALUK | GANAPATI KERE
ಸಾಗರ: ಗಣಪತಿ ಕೆರೆ (Ganapati kere ) ಅಂಗಳದಲ್ಲಿ ಶನಿವಾರ ‘ಕೆರೆಹಬ್ಬ’ (Kere habba) ಆಚರಿಸಲಾಯಿತು. ಕೆರೆಯ ಆವರಣದಲ್ಲಿ ನಡೆದ ಸ್ವಚ್ಚತಾ ಕಾರ್ಯ ವೇಳೆ ಶಾಸಕ ಹರತಾಳು ಹಾಲಪ್ಪ ಅವರು ಖುದ್ದು ಗುದ್ದಲಿ ಹಿಡಿದು ಕೆಲಸ ಮಾಡಿದರು.
ಬೋಟಿಂಗ್ ಮಾಡುವ ಮೂಲಕ ಕೆರೆಯನ್ನು ವೀಕ್ಷಿಸಿದರು. ಕೊಳಚೆ ನೀರು, ಹೂಳಿನಿಂದ ಆವರಿಸಿದದ್ದ ಗಣಪತಿ ಕೆರೆಯನ್ನು ಸ್ವಚ್ಚಗೊಳಿಸಿದ್ದು, ಈಗ ಆಕರ್ಷಣೆಯ ಕೇಂದ್ರವಾಗಿದೆ. ಇದನ್ನು ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಶಾಸಕ ಹಾಲಪ್ಪ ಹೇಳಿದರು.
ಕೆರೆಯ ಸುತ್ತ ವಾಕಿಂಗ್ ಟ್ರ್ಯಾಕ್ ನಿರ್ಮಾಣ, ಕೊಳಚೆ ನೀರು ಸೇರದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಅರವಿಂದ್ ರಾಯ್ಕರ್, ರಾಜು ಬಣಕಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕೆರೆ ಸ್ವಚ್ಚತೆಯಲ್ಲಿ ಪಾಲ್ಗೊಂಡ ಸ್ವಯಂ ಕಾರ್ಯಕರ್ತರಿಗೆ ಉಪಹಾರದ ವ್ಯವಸ್ಥೆಯನ್ನು ಭಾನುವಾರ ಮಾಡಲಾಗಿತ್ತು.